Publish Date: Sat, 23 Mar 2019 (19:03 IST)
Updated Date: Sat, 23 Mar 2019 (19:05 IST)
ಡಿಸಿ, ಎಸಿ ಮುಂಡೆಗಂಡರಿಗೆ ಏನೂ ಗೊತ್ತಾಗೋದಿಲ್ಲ. ಹೀಗಂತ ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ಹರಿಹಾಯ್ದಿದ್ದಾರೆ.
ಭೂ ಸುಧಾರಣಾ ಕಾಯ್ದೆ ಸರಿಯಾಗಿ ಜಾರಿಯಾಗ್ತಿಲ್ಲ. ಇವತ್ತಿಗೂ ರೈತರಿಗೆ ಭೂ ಪಹಣಿ ಕೊಡ್ತಿಲ್ಲ ಅಂತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ ನೀಡಿದ್ದಾರೆ.
ಡಿಸಿ, ಎಸಿ ಮುಂಡೆಗಂಡರಿಗೆ ಏನೂ ಗೊತ್ತಾಗಲ್ಲ ಎಂದ ಅವರು, ನಾನು ಮಂತ್ರಿಯಾಗಿದ್ದ ಬೈದು ಏನೋ ಒಂದು ಮಾಡಿದ್ದೆ. ಆದ್ರೆ ಸಮಸ್ಯೆಗಳು ಎಲ್ಲೂ ಬಗೆಹರಿಯಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.
ಭಾಷಣದಿಂದ ಏನೂ ಮಾಡೋಕೆ ಆಗಲ್ಲ. ಹೋರಾಟವೇ ಎಲ್ಲದಕ್ಕೂ ಪರಿಹಾರವಾಗಲಿದೆ. ನಾನು ಮತ್ತೆ ಹೋರಾಟಕ್ಕೆ ಇಳಿಯಬೇಕೆಂದಿದ್ದೇನೆ ಅಂತ ಅಧಿಕಾರಿಗಳ ವಿರುದ್ಧ ಹೋರಾಟಕ್ಕಿಳಿಯುವ ನಿರ್ಧಾರವನ್ನು ಕಾಗೋಡು ತಿಮ್ಮಪ್ಪ ಪ್ರಕಟಿಸಿದ್ರು.