Webdunia - Bharat's app for daily news and videos

Install App

ಕೊಚ್ಚಿಹೋದ ಕಾಲುಸಂಕ: ಸಂಕಷ್ಟದಲ್ಲಿ ಮಕ್ಕಳು

Webdunia
ಶನಿವಾರ, 18 ಆಗಸ್ಟ್ 2018 (19:18 IST)
ಕರಾವಳಿ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಕೊಂಚ ಕಡಿಮೆಯಾಗಿದ್ದರೂ ಸಾಕಷ್ಟು ಅವಾಂತರ ಸೃಷ್ಟಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಜೊಯಿಡಾ ತಾಲೂಕಿನ ಜಗಲಪೇಟ ಗ್ರಾಮ ಪಂಚಾಯತ ವ್ಯಾಪ್ತಿಯ ತಿಂಬೋಲಿಗೆ ಸಂಪರ್ಕ ಕಲ್ಪಿಸುವ ಕಾಲುಸಂಕ ಕೊಚ್ಚಿಕೊಂಡು ಹೋಗಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಶಾಲೆಗೆ ತೆರಳುವ ಮಕ್ಕಳು ಜೀವ  ಭಯದಿಂದಲೇ ಹಳ್ಳ ದಾಟಿ ಶಾಲೆಗೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆ ಇರುವ ಕಾರಣ ಒಂದೆರೆಡು ದಿನ ಮಕ್ಕಳು ಮನೆಗೆ ಬರಲಿಕ್ಕಾಗದೇ ಶಾಲೆಯಲ್ಲಿಯೇ ರಾತ್ರಿ ಕಳೆದಿದ್ದರು.

ಇನ್ನು ಕೊಂಚ ಮಳೆ ಕಡಿಮೆಯಾಗಿರುವ ಬೆನ್ನಲೆ ಮನೆ ಸೇರಿದ್ದ ವಿದ್ಯಾರ್ಥಿಗಳು ಪುನಃ ಶಾಲೆಗೆ ತೆರಳಿ ವಾಪಸ್ಸಾಗುವ ಹೊತ್ತಿಗೆ ನೀರಿನ ಸೆಳೆತಕ್ಕೆ  ಸೇತುವೆ ಕೊಚ್ಚಿಹೋಗಿದೆ. ತುಂಬಾ ಅಪಾಯಕಾರಿಯಾಗಿರುವ ಈ ಹಳ್ಳ  ಒಂದು ಚೂರು ಆಯ ತಪ್ಪಿದರೂ ಮಕ್ಕಳು ನೀರಿನಲ್ಲಿ ಕೊಚ್ಚಿಹೋಗುವುದು ಪಕ್ಕಾ. ಪಾಲಕರ ಸಹಾಯದಿಂದ ನದಿ ದಾಟಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಗಳ ಗಮನಕ್ಕೂ ತರಲಾಗಿದೆ.  ಜೀವ ಬಲಿ ಆಗುವ ಮೋದಲು ಇಲ್ಲಿ ವ್ಯವಸ್ಥೆ ಸರಿಪಡಿಸುವತ್ತ ಸಂಬಂಧಿಸಿದ ಇಲಾಖೆ ಮತ್ತು ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೀದರ್‌; ಸ್ಲೀಪರ್‌ ಬಸ್‌ನಲ್ಲೇ ಆತ್ಮಹತ್ಯೆಗೆ ಶರಣಾದ ಬಸ್‌ ಚಾಲಕ, ಪರಿಹಾರಕ್ಕೆ ಆಗ್ರಹ

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶೇಷ ಮಾನ್ಯತೆಯ ಗರಿ

ಧರ್ಮಸ್ಥಳದಲ್ಲಿ ವಿಚಾರದಲ್ಲಿ ಸರ್ಕಾರದ ನಡೆ ಸರಿಯಿಲ್ಲ: ಕುಮಾರಸ್ವಾಮಿ ಕಿಡಿ

ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಈಗ ಸುಜಾತ ಭಟ್ ಗೆ ನೋ ಎಂಟ್ರಿ

ಮೈಸೂರು ದಸರಾ ಸುತ್ತಲಿನ ಬೆಳವಣಿಗೆ ಬೇಸರ ತಂದಿದೆ: ಪ್ರಮೋದಾದೇವಿ ಒಡೆಯರ್

ಮುಂದಿನ ಸುದ್ದಿ
Show comments