Select Your Language

Notifications

webdunia
webdunia
webdunia
webdunia

ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಹಸುಗೂಸು ಸಜೀವ ದಹನ

ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಹಸುಗೂಸು ಸಜೀವ ದಹನ
Chamarajnagar , ಶುಕ್ರವಾರ, 10 ಫೆಬ್ರವರಿ 2017 (09:44 IST)
ಚಾಮರಾಜನಗರ: ಆನೆಗಳನ್ನು ಬೆದರಿಸಲು ಹಚ್ಚಿದ ಬೆಂಕಿ ಗುಡಿಸಲಿಗೆ ತಗುಲಿ 9 ತಿಂಗಳ ಮಗು ಸಜೀವ ದಹನವಾದ ಘಟನೆ ಚಾಮರಾಜನಗರದ ಮಹದೇಶ್ವರ ಪುರ ವ್ಯಾಪ್ತಿಯಲ್ಲಿ ನಡೆದಿದೆ.

ಅರಣ್ಯ ಇಲಾಖೆಯ ಸಾಗುವಳಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ದಂಪತಿಯ 9 ತಿಂಗಳ ಕಂದಮ್ಮ ಬೆಂಕಿಗೆ ಆಹುತಿಯಾಗಿದೆ. ಇಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಿದ್ದು, ಅವುಗಳನ್ನು ಬೆದರಿಸಲು ಬೆಂಕಿ ಹಚ್ಚಲಾಗಿತ್ತು. ಇದು ಅಕಸ್ಮತ್ತಾಗಿ ಗುಡಿಸಲಿಗೆ ತಗುಲಿದೆ.

ಈ ಸಂದರ್ಭದಲ್ಲಿ ತಾಯಿ ಪಕ್ಕದ ನದಿಗೆ ನೀರು ತರಲೆಂದು ಹೊರ ಹೋಗಿದ್ದಳು. ಈ ಸಂದರ್ಭದಲ್ಲಿ ಮಗು ಮಾತ್ರ ಮನೆಯಲ್ಲಿತ್ತು. ಆಗ ದುರ್ಘಟನೆ ನಡೆದಿದೆ. ಮಹದೇಶ್ವರಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಯಾವುದೇ ವಿಮಾನ ನಿಲ್ದಾಣಕ್ಕೂ ಇನ್ನು ಹೆಸರಿರೋದಿಲ್ಲ!