Select Your Language

Notifications

webdunia
webdunia
webdunia
webdunia

ಶಾಪಿಂಗ್ ಮಾರ್ಟ್ ನಲ್ಲಿ ಅಗ್ನಿ ಅವಘಡ - ಬೀದಿಗೆಬಿದ್ದ ನೌಕರರು

ಶಾಪಿಂಗ್ ಮಾರ್ಟ್ ನಲ್ಲಿ ಅಗ್ನಿ ಅವಘಡ - ಬೀದಿಗೆಬಿದ್ದ ನೌಕರರು
bangalore , ಬುಧವಾರ, 7 ಸೆಪ್ಟಂಬರ್ 2022 (19:59 IST)
ಶಾಪಿಂಗ್ ಮಾರ್ಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಒಂದೇ ರಾತ್ರಿಯಲ್ಲಿ‌ 4 ಕೋಟಿ ನಷ್ಟ ಉಂಟಾಗಿದೆ. ಹತ್ತಾರು ನೌಕರರ ಬದುಕು ಬೀದಿಗೆ ಬಿದ್ದಿದೆ.
 
ನಂಜಪ್ಪ ಸರ್ಕಲ್ ಬಳಿಯ ಶಾಂತಾರಾಮ್ ಕಾಂಪ್ಲೆಕ್ಸ್ ನಲ್ಲಿದ್ದ ಫ್ಯಾಮಿಲಿ ಶಾಪಿಂಗ್ ಮಾರ್ಟ್ ಅಗ್ನಿ ಅವಘಡಕ್ಕೆ ತುತ್ತಾಗಿದೆ.ಅನ್ವರ್ ಎಂಬುವವರ ಮಾಲಿಕತ್ವದ ಶಾಪಿಂಗ್ ಮಾರ್ಟ್ ಇದ್ದಾಗಿದ್ದು,ರಾತ್ರಿ‌ 1:30ರ ಸುಮಾರಿಗೆ ಕಾಂಪ್ಲೆಕ್ಸ್ ನ ಒಂದು ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ಸ್ಥಳೀಯರು ರವಾನಿಸಿದ್ದಾರೆ.ಆರಂಭದಲ್ಲಿ ಸ್ಥಳಕ್ಕೆ ಏಕೈಕ ಅಗ್ನಿಶಾಮಕ ದಳದ ವಾಹನ ಬಂದಿದೆ. ತದನಂತರ ಬೆಂಕಿಯ ಕೆನ್ನಾಲಿಗೆ ಕಂಡು ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಗಿತ್ತು.ಉಳಿದ ವಾಹನಗಳು ತಲುಪುವಷ್ಟರಲ್ಲಿ ಇಡೀ ಕಾಂಪ್ಲೆಕ್ಸ್ ಅಗ್ನಿಗಾಹುತಿಯಾಗಿದೆ.ಶಾಪಿಂಗ್ ಮಾರ್ಟಿನಲ್ಲಿದ್ದ 4 ಲಕ್ಷ ನಗದು 3 ಕೋಟಿಯಷ್ಟು ವಸ್ತುಗಳು 1 ಕೋಟಿ ಮೌಲ್ಯದ ಪೀಠೋಪಕರಣ ಸಂಪೂರ್ಣ ಸುಟ್ಟು ಭಸ್ಮವಾಗಿದೆ.9 ಅಗ್ನಿಶಾಮಕ ವಾಹನಗಳಿಂದ ಬೆಳಗ್ಗಿನ ಜಾವದವರೆಗೂ ಬೆಂಕಿ‌ ನಂದಿಸುವ ಕಾರ್ಯ ಮುಂದುವರೆದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷದ ವತಿಯಿಂದ ಭಾರತ್ ಜೋಡೋ ಯಾತ್ರಾಗೆ ಸಿದ್ಧತೆ