Webdunia - Bharat's app for daily news and videos

Install App

ಭೂಮಿಯಿಂದ ಮೇಲೆದ್ದ ಬೆಂಕಿ ಜ್ವಾಲೆ: ಆತಂಕದಲ್ಲಿ ಜನತೆ

Webdunia
ಭಾನುವಾರ, 7 ಅಕ್ಟೋಬರ್ 2018 (18:00 IST)
ಲಾವರಸದಂತೆ ಭೂಮಿಯಿಂದ ಬೆಂಕಿಯ ಜ್ವಾಲೆ ಮೇಲೆ ಏಳುತ್ತಿದೆ. ಇದರಿಂದ ಜನರು ಭಯಭೀತರಾಗಿರುವ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಮನಮೈನಹಟ್ಟಿ ನಾರಾಯಣ ನಾಯ್ಕ್ ಎಂಬುವವರ ಜಮೀನಿನಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಸಮೀಪದ ಮನಮೈನಹಟ್ಟಿ ಜಮೀನಿನಲ್ಲಿ ವಿದ್ಯುತ್ ತಂತಿಯಲ್ಲಿ ಸಮಸ್ಯೆಯಾಗಿ ಲಾವಾರಸದಂತೆ ಬೆಂಕಿ ಉತ್ಪತ್ತಿಯಾಯಿತು. ಭೂಮಿಯಿಂದ ಕೊತ ಕೊತ ಕುದಿಯುವ ಮಾದರಿಯಲ್ಲಿ ಕಾಣಿಸಿಕೊಂಡ ಬೆಂಕಿ ಜನರಲ್ಲಿ ಆತಂಕವನ್ನುಂಟುಮಾಡಿದೆ.

ನಾಲ್ಕು ದಿನಗಳ ಹಿಂದೆ‌ ನಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಲಾವಾರಸವನ್ನೇ ಹೋಲುವಂತೆ ಕಂಡುಬಂದ ಬೆಂಕಿಗೆ ಜನರು ಆತಂಕಗೊಂಡಿದ್ದಾರೆ.

ವಿದ್ಯುತ್ ಕಂಬದ ಮೂಲಕ ಅರ್ತಿಂಗ್ ಬಂದು ಕಂಬದಲ್ಲಿದ್ದ ಕಬ್ಬಿಣ ಬೆಂಕಿಯಾಗಿ ಬಂದಿದೆ ಎನ್ನುವುದು ಬೆಸ್ಕಾಂ ಸಿಬ್ಬಂದಿ ಹೇಳಿಕೆಯಾಗಿದೆ. ಏನೇ ಆದರೂ ಘಟನೆಯಿಂದ ಮನಮೈನಹಟ್ಟಿ ಗ್ರಾಮದ ಜನತೆಯಲ್ಲಿ ಭಯ ಮನೆಮಾಡಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲಿ ಮಾಡಿದ ಭಾಷಣದಲ್ಲಿ Kalladaka Prabhakar Bhat ಮೇಲೆ ದಾಖಲಾಯಿತು ಪ್ರಕರಣ

Coastal Karnataka Communal Case:ಹೊಸ ವಿಶೇಷ ಪಡೆ ರಚಿಸಿದ ಸರ್ಕಾರ

Communal Case, ಕರಾವಳಿ ಪರಿಸ್ಥಿತಿಗೆ ರಾಜ್ಯ ಸರ್ಕಾರವೇ ಹೊಣೆ: ಬಿವೈ ವಿಜಯೇಂದ್ರ

ಸೇನಾ ಶಿಬಿರದ ಮೇಲೆ ಭೂಕುಸಿತ: ಮೂವರ ಮೃತದೇಹ ಹೊರಕ್ಕೆ, ಹಲವರು ಸಿಲುಕಿರುವ ಶಂಕೆ

ಕೊಲೆ ಪ್ರಕರಣದ ಆರೋಪಿಗಳಿಗೆ ಮತೀಯ ಸಂಘನೆಯ ನಂಟು: ದಕ ಜಿಲ್ಲಾ ಎಸ್ಪಿ ಕೆ ಅರುಣ್‌

ಮುಂದಿನ ಸುದ್ದಿ
Show comments