Webdunia - Bharat's app for daily news and videos

Install App

ಮಧ್ಯರಾತ್ರಿ ಅಗ್ನಿ ದುರಂತ!

Webdunia
ಶುಕ್ರವಾರ, 4 ಫೆಬ್ರವರಿ 2022 (09:25 IST)
ಬೆಂಗಳೂರು : ಬೆಂಗಳೂರಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಗ್ನಿ ಅವಘಡ ಒಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಗ್ಯಾರೇಜ್ ಸುಟ್ಟು ಕರಕಲಾಗಿದೆ.

ವಿವೇಕನಗರ ಮುಖ್ಯರಸ್ತೆಯ ವನ್ನಾರ್ ಪೇಟ್ ಬಳಿಯ ಕಾರು ಗ್ಯಾರೇಜ್ ನಲ್ಲಿ ಈ ಅವಘಡ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಗ್ಯಾರೇಜ್ ನಲ್ಲಿದ್ಸ 3 ಬೈಕ್ 4 ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ಅಷ್ಟೇ ಅಲ್ಲದೇ ಗ್ಯಾರೇಜ್ನಲ್ಲಿದ್ದ ಎರಡು ಸಿಲಿಂಡರ್ ಕೂಡ ಸ್ಪೋಟಗೊಂಡಿವೆ. ಸುಮಾರು 500 ಮೀಟರ್ ನಷ್ಟು ದೂರ ಸಿಲಿಂಡರ್ ಬ್ಲಾಸ್ಟ್ ಆದ ಶಬ್ಧ ಕೇಳಿಬಂದಿದೆ. ಸ್ಫೋಟದ ತೀವ್ರತೆಗೆ ಮಧ್ಯರಾತ್ರಿ ಏರಿಯಾ ಜನ ಗಾಬರಿಗೊಂಡಿದ್ದಾರೆ.

ನಾಸೀರ್ ಎಂಬುವವರ ಮಾಲೀಕತ್ವದ ಗ್ಯಾರೇಜ್ ಇದ್ದಾಗಿದ್ದು, ಸತತ ಒಂದುವರೆ ಗಂಟೆಗಳ ಕಾರ್ಯಾಚರಣೆ ಬಳಿಕ 3 ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಇನ್ನೂ ಬೆಂಕಿ ಬೀಳುತ್ತಿದ್ದಂತೆ ಸ್ಥಳೀಯರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ.  ಧಗಧಗಿಸ್ತಿದ್ದ ಗ್ಯಾರೇಜ್ ನಿಂದ ಮಾಲೀಕ ಕಾರು ಹೊರ ತಂದಿದ್ದಾನೆ. ಪೋಲೊ,ಹ್ಯೂಂಡೈ ಕಂಪನಿ ಕಾರು ಸೇರಿದಂತೆ ಮೂರು ಕಾರುಗಳ ರಕ್ಷಣೆ ಮಾಡಿದ್ದಾನೆ. ಅದಾಗಿಯು ಗಾಜು ಒಡೆದಿದ್ದು,ಕಾರಿನ ಮುಂಭಾಗ ಸುಟ್ಟು ಹೋಗಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಂಗ್ಲಾದೇಶವು ಭಾರತಕ್ಕೆ ಮತ್ತೊಂದು ಪಾಕಿಸ್ತಾನವಾಗಿ ಪರಿಣಮಿಸಿದೆ

ಎಸ್‌ಐಆರ್‌ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡಲಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ

ಆಸ್ಪತ್ರೆಗೆ ಪತಿ ಜತೆ ಬಂದ ಗರ್ಭಿಣಿಗೆ, ಬೈಕ್‌ನಲ್ಲೇ ಡೆಲಿವರಿ, Video

7 ವರ್ಷಗಳ ಪ್ರೀತಿ, ಮಂಗಳಮುಖಿಯನ್ನು ಕೈ ಹಿಡಿದ ಐಟಿ ಉದ್ಯೋಗಿ, Video

ಒದ್ದು ಹಲ್ಲೆ, ಬಿಎಂಟಿಸಿ ಕಂಡಕ್ಟರ್‌ ವೈರಲ್ ವಿಡಿಯೋ ಬೆನ್ನಲ್ಲೇ ಮಹತ್ವದ ಕ್ರಮ

ಮುಂದಿನ ಸುದ್ದಿ
Show comments