Select Your Language

Notifications

webdunia
webdunia
webdunia
webdunia

ಎಸಿ ತಯಾರಿಕಾ ಘಟಕದಲ್ಲಿ ಬೆಂಕಿ: 6 ಮಂದಿ ಸಜೀವ ದಹನ

Fire accident
ಹೈದರಾಬಾದ್ , ಬುಧವಾರ, 22 ಫೆಬ್ರವರಿ 2017 (08:38 IST)
ತಯಾರಿಕಾ ಘಟಕದಲ್ಲಿ ಅಗ್ನಿ ಆಕಸ್ಮಿಕ ನಡೆದು 6 ಮಂದಿ ಸಜೀವ ದಹನಗೊಂಡ ಘಟನೆ ಹೈದರಾಬಾದಿನ ಅತ್ತಾಪುರದಲ್ಲಿ ಇಂದು ಬೆಳಗಿನಜಾವ ನಡೆದಿದೆ.
ಮಧ್ಯರಾತ್ರಿಯಲ್ಲಿ ಕಾರ್ಮಿಕರು ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, 
ಕಂಪನಿ ಮಾಲೀಕ ಪ್ರಮೋದ್ ಕುಮಾರ್‌ನನ್ನು  ವಿಚಾರಣೆಗೊಳಪಡಿಸಿದ್ದಾರೆ.
 
ಮೃತರೆಲ್ಲರೂ ಬಿಹಾರ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ದುರಂತಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.
 
ಸ್ಥಳಕ್ಕೆ ದೌಡಾಯಿಸಿರುವ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದೆ
 
ಮೃತರ ಕುಟುಂಬದವರಿಗೆ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು ಮತ್ತು ಕಾಶ್ಮೀರ: ಅದ್ದೂರಿ ವಿವಾಹಗಳಿಗೆ ಬಿತ್ತು ಬ್ರೇಕ್