Webdunia - Bharat's app for daily news and videos

Install App

ಶ್ರೀಕಿ ವಿಷ್ಣು ಭಟ್ ವಿರುದ್ದ ಎಫ್.ಐ.ಆರ್ ದಾಖಲು

Webdunia
ಭಾನುವಾರ, 7 ನವೆಂಬರ್ 2021 (20:31 IST)
ಬೆಂಗಳೂರು: ಬಿಟ್​​ ಕಾಯಿನ್​ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ.  ಗಲಾಟೆ ಮಾಡಿ ಪೊಲೀಸ್ ವಶದಲ್ಲಿದ್ದ ಶ್ರೀಕಿ, ವಿಷ್ಣುಭಟ್ ರನ್ನು ಈಗ ಬಂಧಿಸಲಾಗಿದೆ. 
 
ಮೆಡಿಕಲ್​ ಚೆಕಪ್​ ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಭೀಮಾ ಜ್ಯುವೆಲರ್ಸ್​​ ಮಾಲೀಕನ ಮಗ ವಿಷ್ಣು ಭಟ್ ಎಂದು ತಿಳಿದು ಬಂದಿದೆ. 
 
ಮೆಡಿಕಲ್​ ಚೆಕಪ್​ನಲ್ಲಿ ಇಬ್ಬರೂ ಮದ್ಯ ಸೇವಿಸಿರೋದು ದೃಢ ಪಟ್ಟಿದೆ, ಶ್ರೀಕಿ ಮತ್ತು ವಿಷ್ಣು ಭಟ್ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ‌. ಶರಣಪ್ಪ ಮಾಹಿತಿ ನೀಡಿದ್ದಾರೆ. 
 
ಕುಡಿದ ಅಮಲಿನಲ್ಲಿ ಗಲಾಟೆ: 
 
ಕುಡಿದ ಅಮಲಿನಲ್ಲಿದ್ದ ವಿಷ್ಣು ಭಟ್ ಗಲಾಟೆ ಮಾಡಿಕೊಂಡು, ಶ್ರೀಕಿ ಜೊತೆ ಸೇರಿ ಹೋಟೆಲ್ ಸಿಬ್ಬಂದಿ ಮೇಲೆ ಶನಿವಾರ  ಹಲ್ಲೆ ಮಾಡಿದ್ದರು. ಈ  ಹಿನ್ನೆಲೆಯಲ್ಲಿ ನಗರದ ಜೀವನ್ ಭೀಮಾನಗರ ಪೊಲೀಸರು ವಶಕ್ಕೆ ಪಡೆದಿದ್ದರು. 
 
ಪ್ರಭಾವಿಗಳಿಗೆ ನಡುಕ: 
 
ಶ್ರೀಕಿ, ವಿಷ್ಣುಭಟ್ ಬಂಧನದಿಂದಾಗಿ ಪ್ರಭಾವಿಗಳಿಗೆ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ
viki

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments