Publish Date: Thu, 13 Oct 2022 (11:58 IST)
Updated Date: Thu, 13 Oct 2022 (12:00 IST)
ಬೆಂಗಳೂರು : ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಮಾತನಾಡುತ್ತ ಸಿದ್ದರಾಮಯ್ಯ ಅವಧಿಯ ಹಗರಣಗಳ ತನಿಖೆ ಮಾಡಿಸ್ತೀವಿ.
ಅವರನ್ನು ಎಲ್ಲಿಡ್ಬೇಕೋ ಅಲ್ಲಿ ಇಡ್ತೀವಿ ಎಂದು ವಾರ್ನಿಂಗ್ ನೀಡಿದ್ದರು. ಇಂದು ಕೂಡ ಸಿಎಂ ಇದೇ ಅರ್ಥದ ಮಾತುಗಳನ್ನು ಹೊಸಪೇಟೆಯಲ್ಲಿ ಮಾತನಾಡಿದ್ದಾರೆ.
ಈ ಮಾತುಗಳ ಬೆನ್ನಲ್ಲೇ, ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದೆ. ಕಾನೂನು ಗಾಳಿಗೆ ತೂರಿ ಸಿದ್ದಾಪುರ ಬಳಿಯ 200 ಕೋಟಿ ಮೌಲ್ಯದ 2.39 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ.
ಬಿಡಿಎ ಪಾರ್ಕ್ ಮತ್ತು ಸಾರ್ವಜನಿಕರ ಬಳಕೆಗೆ ಮೀಸಲಿಟ್ಟಿದ್ದ ಭೂಮಿಯನ್ನು ಅಶೋಕ್ ಧಾರಿವಾಲ್ ಎಂಬ ಬಿಲ್ಡರ್ಗೆ ಅನುಕೂಲ ಮಾಡಿಕೊಡುವ ಸಲುವಾಗಿ ಡೀನೋಟಿಫೈ ಮಾಡಿದ್ದಾರೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.