Select Your Language

Notifications

webdunia
webdunia
webdunia
webdunia

ವಿನಾಕಾರಣ ಕೃಷ್ಣ ಮಠದ ಹೆಸರು ಬಳಕೆ: ಬೇಸರ ವ್ಯಕ್ತಪಡಿಸಿದ ಪೇಜಾವರ್ ಶ್ರೀ

ವಿನಾಕಾರಣ ಕೃಷ್ಣ ಮಠದ ಹೆಸರು ಬಳಕೆ: ಬೇಸರ ವ್ಯಕ್ತಪಡಿಸಿದ ಪೇಜಾವರ್ ಶ್ರೀ
ಉಡುಪಿ , ಗುರುವಾರ, 13 ಅಕ್ಟೋಬರ್ 2016 (18:57 IST)
ಚಲೋ ಉಡುಪಿಗೂ ಕೃಷ್ಣ ಮಠಕ್ಕೂ ಏನು ಸಂಬಂಧ. ವಿನಾಕಾರಣ ಕೃಷ್ಣ ಮಠದ ಹೆಸರು ಪ್ರಸ್ತಾಪಿಸಲಾಗುತ್ತಿದೆ. ಹಾಗೂ ನನ್ನ ವಿರುದ್ಧವು ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಪೇಜಾವರ್ ಶ್ರೀಗಳು ಬೇಸರ ವ್ಯಕ್ತಪಡಿಸಿದರು.
 
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಕೃಷ್ಣ ಮಠದಲ್ಲಿ ಯಾವುದೇ ಪಂಕ್ತಿ ಬೇಧ ನಡೆಯುತ್ತಿಲ್ಲ. ಎಲ್ಲರೂ ಸೇರಿ ಒಟ್ಟಿಗೆ ಊಟ ಮಾಡಲಾಗುತ್ತಿದೆ. ದಲಿತರು ಸಹ ಖುಷಿಯಿಂದ ಮಠಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.
 
ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೇ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ. ಇದರ ಪರಿಣಾಮ ಸರಕಾರಕ್ಕೆ ಬಿಟ್ಟಿದ್ದು. ನನ್ನೊಂದಿಗೆ ಭಕ್ತರು ಸಹ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ ಎಂದು ಪೇಜಾವರ ಶ್ರೀ ವಿಶ್ವಾಸ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭೋಪಾಲ್‌ಗೆ ಪ್ರಧಾನಿ ಭೇಟಿ: ಅಫ್ಘನ್ ಉಗ್ರರ ಕರೆಗೆ ಬೆಚ್ಚಿಬಿದ್ದ ಭೋಪಾಲ್ ನಿವಾಸಿಗಳು