Select Your Language

Notifications

webdunia
webdunia
webdunia
webdunia

ಜುಲೈನೊಳಗೆ ರೈತರ ಸಾಲ ಮನ್ನಾ ಮಾಡಿ: ಯಡಿಯೂರಪ್ಪ ವಾರ್ನಿಂಗ್

ಜುಲೈನೊಳಗೆ ರೈತರ ಸಾಲ ಮನ್ನಾ ಮಾಡಿ: ಯಡಿಯೂರಪ್ಪ ವಾರ್ನಿಂಗ್
ಬೆಂಗಳೂರು , ಶನಿವಾರ, 27 ಮೇ 2017 (12:43 IST)
ಮುಂಬರುವ ಜುಲೈ ತಿಂಗಳೊಳಗೆ ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಲಕ್ಷಾಂತರ ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
 
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಾಲ್ಕು ವರ್ಷದ  ಸಾಧನೆ ಎಂದರೆ ಭ್ರಷ್ಟಾಚಾರದಲ್ಲಿ ರಾಜ್ಯವನ್ನು ನಂಬರ್ ಒನ್ ಸ್ಥಾನಕ್ಕೆ ತಂದಿರುವುದು.ಎರಡನೇ ಸಾಧನೆ ಎಂದರೆ ಸೇಡು ತೀರಿಸಿಕೊಳ್ಳಲು ಎಸಿಬಿ ರಚನೆ ಮಾಡಿರುವುದು ಎಂದು ಲೇವಡಿ ಮಾಡಿದ್ದಾರೆ.
 
ಗೋಹತ್ಯೆ ನಿಷೇಧ ಪ್ರಧಾನಿ ಮೋದಿರವರ ದಿಟ್ಟ ನಿರ್ಧಾರ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸಂಪೂರ್ಣ ದೇಶವೇ ಪ್ರಧಾನಿಯವರ ಆದೇಶದಿಂದ ಸಂತಸಗೊಂಡಿದೆ ಎಂದರು.
 
ರಾಜ್ಯಾದ್ಯಂತ ಬರ ಪ್ರವಾಸ ಹಮ್ಮಿಕೊಂಡಿದ್ದು, ದಲಿತರ ಕೇರಿ, ಸ್ಲಂ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ್ದೇನೆ. ಗೋಶಾಲೆಗಳಿಗೂ ಭೇಟಿ ನೀಡಿದ್ದೇನೆ. 5 ಕೆಜಿ ಮೇವು ಗೋವುಗಳಿಗೆ ಯಾವುದಕ್ಕೆ ಸಾಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್,ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂಗಳ ಮತಕ್ಕಾಗಿ ಗೋಹತ್ಯೆ ನಿಷೇಧ ಜಾರಿ: ಕುಮಾರಸ್ವಾಮಿ