Webdunia - Bharat's app for daily news and videos

Install App

ಜಲಾಶಯ ಭರ್ತಿಯಾದರೂ ಸಂಕಷ್ಟದಲ್ಲಿರುವ ರೈತರು

Webdunia
ಮಂಗಳವಾರ, 7 ಆಗಸ್ಟ್ 2018 (16:03 IST)
ದಾವಣಗೆರೆ ಜಿಲ್ಲೆಯ ಜೀವನಾಡಿಯಾಗಿರುವ ಭದ್ರೆ ತುಂಬಿದೆ. ಆದರೂ ರೈತರಿಗೆ ಮಾತ್ರ ಸಂಕಷ್ಟ ತಪ್ಪಿದ್ದಲ್ಲ. ಭದ್ರಾ ಕ್ಯಾನಲ್ ನಲ್ಲಿ ನೀರು ಹರಿದರೂ, ನೀರಾವರಿ ಇಲಾಖೆ ಮುಂದುಗಡೆ ನೀರು ಬಿಡಿ ಎಂದು ಅನ್ನದಾತರು ಪ್ರತಿಭಟನೆ ಮಾಡುವುದು ಮತ್ತೆ ಮುಂದುವರೆದಿದೆ.  

ನೀರಾವರಿ ಇಲಾಖೆ ಮುಂದೆ ಪ್ರತಿಭಟನೆ ಮಾಡುತ್ತಿರುವ ರೈತರು, ಸಪ್ಪೆ ಮೋರೆ ಹಾಕಿ ನಿಂತಿರುವ ಅಧಿಕಾರಿಗಳು. ಇತ್ತ ಒಣಗಿ ಹೋಗುತ್ತಿರುವ ಬೆಳೆಗಳು. ಇಂತದೊಂದು ಸನ್ನಿವೇಶ ನಿರ್ಮಾಣವಾಗಿರುವುದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ. ಈ ಬಾರಿ ಭದ್ರೆ ತುಂಬಿ ತುಳುಕುತ್ತಿದ್ದಾಳೆ. ಅಲ್ಲದೆ ಎರಡು ಬೆಳೆಗೆ ನೀರು ಕೊಡುವುದಾಗಿ ಕೂಡ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದ್ರೆ ಹರಿಹರ ಕೊನೆ ಭಾಗದ ರೈತರಿಗೆ ಮಾತ್ರ ನೀರು ಸಿಗುತ್ತಿಲ್ಲ. ಈಗಾಗಲೇ ಭದ್ರಾ ಡ್ಯಾಂ ನಿಂದ ನೀರು ಬಿಟ್ಟು 25 ದಿನ ಕಳೆದಿವೆ.

ಆ ನೀರು ಮಾತ್ರ ಕೊನೆ ಭಾಗದ ರೈತರಿಗೆ ಮರೀಚಿಕೆಯಾಗಿ ಪರಿಣಮಿಸಿದೆ. ಅದರಲ್ಲೂ ಕೊಂಡಜ್ಜಿ, ಕಕ್ಕರಗೊಳ್ಳ, ಬುಳ್ಳಾಪುರ, ಅರಸಪುರ ಗ್ರಾಮದ ಸುಮಾರು 30ಕ್ಕೂ ಅಧಿಕ ಹಳ್ಳಿಯ ರೈತರಿಗೆ ನೀರು ಇಲ್ಲದೆ, ಬೆಳೆದ ಬೆಳೆ ನೆಲಕಚ್ಚಿವೆ. ಆದ್ರೆ ಅಧಿಕಾರಿಗಳು ಮಾತ್ರ ತಮ್ಮ ಸೋಗಲಾಡಿ ತನದಿಂದ ಮೇಲೆದ್ದಿಲ್ಲ. ಜೊತೆಗೆ ಚಾನಲ್‌ನಲ್ಲಿ ಹೂಳು ತಗಿಸದೆ ರೈತರ ಜೀವನ ಜೊತೆಗೆ ಆಟವಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕದ ಟ್ಯಾಕ್ಸಿ ಚಾಲಕರಿಗೆ ಹೊಸ ಭರವಸೆ

ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ: ವಿಜಯೇಂದ್ರ

ಧರ್ಮಸ್ಥಳ ಬುರುಡೆ ರಹಸ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಣ್ಣಾಮಲೈ ಕಿಡಿ

ಸಿಎಂ ಸಿದ್ದರಾಮಯ್ಯ ಅಂದು ಕಾಮನ್‌ಸೆನ್ಸ್‌ ಯೂಸ್ ಮಾಡ್ತಿದ್ರೆ, ಈ ಪರಿಸ್ಥಿತಿಯಲ್ಲ: ಆರ್‌ ಅಶೋಕ್‌

ಹೊಸ ದಿಕ್ಕಿನತ್ತ ತನಿಖೆ, ಶಿವತಾಂಡವದ ಫೋಟೋ ಹಂಚಿಕೊಂಡ ಧರ್ಮಸ್ಥಳ

ಮುಂದಿನ ಸುದ್ದಿ
Show comments