Publish Date: Tue, 19 Oct 2021 (16:38 IST)
Updated Date: Tue, 19 Oct 2021 (16:42 IST)
ಹತ್ತಾರು ವರ್ಷಗಳಿಂದ ನೀರಿಲ್ಲದೆ, ಬಸವಳಿದಿದ್ದಕೊಯಿರಾ ಗ್ರಾಮದ ರೈತರ ಮೊಗದಲ್ಲಿ ಈಗ ಖುಷಿ ಮೂಡಿದ್ದು ಕೆರೆಗೆಹರಿದು ಬರುತ್ತಿರುವ ನೀರನ್ನು ಬಳಸಿ ಭತ್ತದ ಪೈರನ್ನು ನಾಟಿಮಾಡುತ್ತಿದ್ದಾರೆ. ಕೊಯಿರಾ ಕೆರೆ ತುಂಬಿ ಕೋಡಿ ಹರಿದಿದೆ.ತಹಶೀಲ್ದಾರ್ರಿಂದ ಬಾಗಿನ ಅರ್ಪಿಸಲಾಗಿದೆ.ಇದರ ಪ್ರತಿಫಲ, ಜೌಗುನೀರು ರೈತರಿಗೆ ಭತ್ತ ಬೆಳೆಯಲು ಪ್ರೇರಣೆಯಾಗಿದೆ. ಕೆರೆ ಏರಿಹಿಂಭಾಗದ ಜಮೀನಿನಲ್ಲಿ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ.2 ಎಕರೆಯಲ್ಲಿ ಮಸೂರಿ ತಳಿ ಭತ್ತದ ಪೈರು ನಾಟಿ ಮಾಡಿಸುತ್ತಿದ್ದೇನೆ.3 ಲೋಡ್ ಕೊಟ್ಟಿಗೆ ಗೊಬ್ಬರ ಫಲವತ್ತತೆಗೆ ಹಾಕಲಾಗಿದೆ.
4 ಬಾರಿಉಳುಮೆ ಮಾಡಿದ್ದೇನೆ. ನಾಟಿ ಮಾಡಲು ಒಬ್ಬರಿಗೆ 500ರೂ. ಕೂಲಿ, 4ತಿಂಗಳಿಗೆ ಕೊಯ್ಲು, 2 ಎಕರೆಗೆ 40 ಸಾವಿರ ವೆಚ್ಚವಾಗಿದೆ.