Webdunia - Bharat's app for daily news and videos

Install App

ರೈತರಿಗೆ ದೋಖಾ ಮಾಡೋಲ್ಲ; ಮಾಧ್ಯಮಗಳ ವಿರುದ್ಧ ಸಿಎಂ ಸಿಡಿಮಿಡಿ

Webdunia
ಮಂಗಳವಾರ, 11 ಜೂನ್ 2019 (14:24 IST)
ರೈತನಿಗೆ ನಾವು ದೋಖಾ ಹಾಕೊಲ್ಲ. ರಾಷ್ಟ್ರೀಯ ಬ್ಯಾಂಕ್ ವರ್ಗೀಕರಣ ಮಾಡೋವಾಗ ತಪ್ಪಾಗಿದೆ. ಇದು ರಾಷ್ಟ್ರೀಯ ಬ್ಯಾಂಕ್ ನ ಸಮಸ್ಯೆ. ಆದ್ರೆ ಮಾಧ್ಯಮಗಳು ಸುದ್ದಿ ಮಾಡ್ತಿವೆ. ಹೀಗಂತ ಸಿಎಂ ಸಿಡಿಮಿಡಿಗೊಂಡಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ರೈತರ ಬ್ಯಾಂಕ್ ಅಕೌಂಟ್ ಗಳಿಂದ ಸಾಲಮನ್ನಾದ ಹಣ ರೀಫಂಡ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ನಮ್ಮಿಂದ ತಪ್ಪಾಗಿರೋದು ಅಂತ ಬ್ಯಾಂಕ್ ನವರೇ ಹೇಳಿಕೊಂಡಿದ್ದಾರೆ. ಜನರನ್ನ ತಪ್ಪು ದಾರಿಗೆ ಎಳೆಯಬೇಡಿ. ಅಸತ್ಯವಾಗಿರೋದನ್ನ ತೋರಿಸಬೇಡಿ. 800 ರೈತರಿಗೆ ಈ ರೀತಿ ಸಮಸ್ಯೆ ಆಗಿದೆ. ರಾಷ್ಟ್ರೀಕೃತ ಬ್ಯಾಂಕ್ ನಿಂದ ತಪ್ಪಾಗಿರೋದು,ನಮ್ಮಿಂದ ಅಲ್ಲ ಎಂದರು.

ನರೇಂದ್ರ ಮೋದಿ ಅವರದ್ದು ಸ್ವಲ್ಪ ತೋರಿಸಿ. ಬರೀ ನಮ್ದೇ ತಪ್ಲು ಅಂತ ಹೇಳಬೇಡಿ ಎಂದರು.

ನಿಮಗೆ ರಾಜ್ಯದ ಅಭಿವೃದ್ಧಿ ಬೇಕಾ ಅಥವಾ ಹಾಳಾಗ್ಬೇಕಾ ಎಂದು ಮಾಧ್ಯಮ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ವಾಣಿಜ್ಯ ಬ್ಯಾಂಕುಗಳಲ್ಲಿ 7 ಲಕ್ಷ 49 ಸಾವಿರ ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. 3021 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಸಹಕಾರಿ ಬ್ಯಾಂಕ್ ನಿಂದ ‌ 11ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. ಈ ರೈತರಿಗೆ 4 ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ‌ಮಾಡಿದ್ದೇವೆ ಎಂದರು.

ಅಸತ್ಯ ಸುದ್ದಿ ಪ್ರಚಾರ ಮಾಡಿ ನಿಮಗೇನು ಲಾಭ? ರೈತರು ಆತಂಕ ಆಗುವಂತೆ ನೀವೇ ಮಾಡ್ತಿದ್ದೀರಾ. ಇದು ಕೇವಲ 200 ರೈತರ ಸಮಸ್ಯೆ ಅಲ್ಲ. 13123 ರೈತರಿಗೆ ಹೀಗೆ ಆಗಿದೆ. ಮೋದಿ ಬಗ್ಗೆನೂ ತೋರಿಸಿ. ರಾಷ್ಟ್ರೀಯ ಬ್ಯಾಂಕ್ ಸಮಸ್ಯೆ ಅದು ಅಂತ ಸಿಎಂ ಹೇಳಿದ್ರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments