Select Your Language

Notifications

webdunia
webdunia
webdunia
webdunia

ರೈತರೇ ಆತ್ಮಹತ್ಯೆ ಮಾಡ್ಕೋಬೇಡಿ, 2018ರವರೆಗೆ ಕಾಯಿರಿ: ಎಚ್.ಡಿ.ರೇವಣ್ಣ

ರೈತರೇ ಆತ್ಮಹತ್ಯೆ ಮಾಡ್ಕೋಬೇಡಿ, 2018ರವರೆಗೆ ಕಾಯಿರಿ: ಎಚ್.ಡಿ.ರೇವಣ್ಣ
ಬೆಂಗಳೂರು , ಶುಕ್ರವಾರ, 1 ಸೆಪ್ಟಂಬರ್ 2017 (14:21 IST)
ಸಾಲದ ಹೊರೆಯಿಂದಾಗಿ ಬೇಸತ್ತು ರೈತರು ಆತ್ಮಹತ್ಯೆಗೆ ಶರಣಾಗಬೇಡಿ. ಒಂದು ವರ್ಷದವರೆಗೆ ಕಾಯಿರಿ. ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಕರೆ ನೀಡಿದ್ದಾರೆ.
ಮುಂದಿನ ವರ್ಷ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಅಧಿಕಾರಕ್ಕೆ ಬಂದ ನಂತರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದೆ. ಜೆಡಿಎಸ್ ಪಕ್ಷದಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ಛಾಪಾಕಾಗದದ ಮೇಲೆ ಬರೆದುಕೊಡ್ತೇನೆ ಎಂದು ಸವಾಲ್ ಹಾಕಿದ್ದಾರೆ. 
 
ಜೆಡಿಎಸ್ ಪಕ್ಷ ಬಿಟ್ಟು ಬೇರೆ ಯಾವ ಪಕ್ಷವೂ ರೈತರ ಉದ್ಧಾರ ಮಾಡೋಕೆ ಸಾಧ್ಯವಿಲ್ಲ. ಮೋಡವು ಬಿತ್ತನೆಯೇ ಇಲ್ಲ ಯಾರೋ ದುಡ್ಡು ಮಾಡಿ ಓಡಿ ಹೋಗುವ ಯೋಜನೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ಮೋಡ ಬಿತ್ತನೆಯ ಬದಲು ಇಸ್ರೇಲ್ ತಂತ್ರಜ್ಞಾನದಂತೆ ಹನಿ ನೀರಾವರಿಗೆ ಆದ್ಯತೆ ನೀಡಿದ್ದಲ್ಲಿ ರೈತರ ಬದುಕು ಹಸನಾಗುತ್ತಿತ್ತು ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಲಿತರು ಮಂತ್ರಿಯಾಗುವುದು ಬಿಜೆಪಿಗೆ ಇಷ್ಟವಿಲ್ಲ: ತಿಮ್ಮಾಪುರ್