Select Your Language

Notifications

webdunia
webdunia
webdunia
webdunia

ವಿಷ ಸೇವಿಸಿ ಸಚಿವರೆದುರೇ ಆತ್ಮಹತ್ಯೆಗೆ ಯತ್ನಿಸಿದ ರೈತ

ವಿಷ ಸೇವಿಸಿ ಸಚಿವರೆದುರೇ ಆತ್ಮಹತ್ಯೆಗೆ ಯತ್ನಿಸಿದ ರೈತ
ಬೆಂಗಳೂರು , ಶನಿವಾರ, 29 ಏಪ್ರಿಲ್ 2017 (14:48 IST)
ಸರ್ಕಾರ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಕೊಟ್ಟಿಲ್ಲವೆಂದು ಸಚಿವರೆದುರೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದ ಕಲಾಮಂದಿರದಲ್ಲಿ ನಡೆದಿದೆ.

ಕಲಾಮಂದಿರದಲ್ಲಿ ನಡೆಯುತ್ತಿದ್ದ ಬಸವ ಜಯಂತಿ ಸಂದರ್ಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಸ್ತುವಾರಿ ಸಚಿವ ಕೃಷ್ಣಪ್ಪಗೆ ಮನವಿ ಪತ್ರ ಸಲ್ಲಿಸಿದ ಬಳಿಕ ವೇದಿಕೆಯಿಂದ ಕೆಳಗಿಳಿಯುತ್ತಿದ್ದ ವೇಳೆ ರೈತ ಅಪ್ಪಾಜಿಗೌಡ ಕುಸಿದು ಬಿದ್ದಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಮುನ್ನವೇ ರೈತ ವಿಷ ಸೇವಿಸಿ ಬಂದಿದ್ದ ಎನ್ನಲಾಗಿದೆ.

ಅಸ್ವಸ್ಥ ರೈತನನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ರೈತ ಅಪ್ಪಾಜಿಗೌಡ ಮಂಡ್ಯದ ಮದ್ದೂರು ತಾಲೂಕಿನ ಅಂಕನಾಥಪುರದವರು ಎಂದು ತಿಳಿದುಬಂದಿದೆ. ತಮ್ಮ ಜಮೀನನ್ನ ನಾಲೆ ಕಟ್ಟಲು ವಶಪಡಿಸಿಕೊಂಡು ಪರಿಹಾರ ನೀಡಿರಲಿಲ್ಲ ಎಂಬುದು ರೈತನ ಆರೋಪ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್ ಆರೋಪಿ ಸಂಸದನಿಗೆ ಬೇಲ್ ಕೊಟ್ಟ ನ್ಯಾಯಾಧೀಶರೇ ಸಸ್ಪೆಂಡ್!