Select Your Language

Notifications

webdunia
webdunia
webdunia
webdunia

ಅಂತ್ಯಕ್ರಿಯೆಗೆ ಎಚ್ ಡಿ ಕುಮಾರಸ್ವಾಮಿ ಬರುವಂತೆ ಡೆತ್ ನೋಟ್ ಬರೆದ ರೈತ!

ಅಂತ್ಯಕ್ರಿಯೆಗೆ ಎಚ್ ಡಿ ಕುಮಾರಸ್ವಾಮಿ ಬರುವಂತೆ ಡೆತ್ ನೋಟ್ ಬರೆದ ರೈತ!
Mysore , ಗುರುವಾರ, 6 ಏಪ್ರಿಲ್ 2017 (12:44 IST)
ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾವಿಗೆ ಕಾರಣವೇನೆಂದು ಡೆತ್ ನೋಟ್ ಬರೆದಿಟ್ಟು ಸಾಯುವುದು ಸಹಜ. ಇಲ್ಲೊಬ್ಬ ರೈತ ತಾನು ಸತ್ತ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅಂತಿಮ ದರ್ಶನ ಪಡೆಯಬೇಕೆಂದು ಬರೆದಿಟ್ಟು ತೀರಿಕೊಂಡಿದ್ದಾನೆ.

 

ಮಂಡ್ಯದ ಬಿ. ಹೊಸೂರಿನಲ್ಲಿ ಈ ಘಟನೆ ನಡೆದಿದೆ. ಆರು ಎಕರೆ ಜಮೀನು ಹೊಂದಿದ್ದ ರೈತ ಶಿವಣ್ಣ ತನ್ನ ಹೊಲದಲ್ಲಿ ಹಲವು ಬೆಳೆ ಬೆಳೆಯುತ್ತಿದ್ದ. ಆದರೆ ಭೀಕರ ಬರಗಾಲದಿಂದಾಗಿ ಸುಮಾರು 5 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ. ಇದನ್ನು ತೀರಿಸಲಾಗದೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 
ಡೆತ್ ನೋಟ್ ನಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ನಮಸ್ಕಾರ ತಿಳಿಸಿದ ಶಿವಣ್ಣ, ತಾನು ಸತ್ತ ಮೇಲೆ ಕುಮಾರಸ್ವಾಮಿ ನನ್ನನ್ನು ನೋಡಲು ಬರಬೇಕು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಬರೆದಿದ್ದಾನೆ. ಇದೀಗ ಮೃತ ರೈತನ ಅಂತಿಮ ಆಸೆ ಪೂರೈಸಲು ಕುಮಾರಸ್ವಾಮಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಎಷ್ಟು ಬಾರಿ ವಿದೇಶ ಯಾತ್ರೆ ಮಾಡಿದ್ದಾರೆ ಗೊತ್ತಾ?