Select Your Language

Notifications

webdunia
webdunia
webdunia
webdunia

ಹಾಸನದಲ್ಲಿ ರೈತ ಸಜೀವ ದಹನ

ರೈತ ಸಜೀವ ದಹನ
ಹಾಸನ , ಶುಕ್ರವಾರ, 10 ಮಾರ್ಚ್ 2017 (11:25 IST)
ಹಾಸನ(ಮಾ.10): ಹೊಲಕ್ಕೆ ಹೋಗಿದ್ದ ರೈತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ. ಅಗ್ನಿಗಾಹುತಿಯಾದ ರೈತನನ್ನ ಪುಟ್ಟಸ್ವಾಮಿಗೌಡ ಎಂದು ಗುರ್ತಿಸಲಾಗಿದೆ. 

ಸಂಬಂಧಿಕರು ಹೇಳುವ ಪ್ರಕಾರ, ನಿನ್ನೆ ಬೆಳಗ್ಗೆ ಪುಟ್ಟಸ್ವಾಮಿಗೌಡ ಊಟ ಮುಗಿಸಿ ಹೊಲಕ್ಕೆ ಹೋಗಿದ್ದರು. ಹೊಲದಲ್ಲಿದ್ದ ತೇಗದ ಮರಗಳಿಗೆ ಬಿದ್ದ ಬೆಂಕಿ ನಂದಿಸಲು ಹೋದಾಗ ಅಗ್ನಿಜ್ವಾಲೆಯಿಂದ ತಪ್ಪಿಸಿಕೊಳ್ಲಲಾಗದೆ ಸಜೀವ ದಹನವಾಗಿರಬಹುದು ಎಂದು ತಿಳಿದುಬಂದಿದೆ.
ಮಧ್ಯಾಹ್ನದವರೆಗೂ ಪುಟ್ಟಸ್ವಾಮಿಗೌಡ ಮನೆಗೆ ವಾಪಸ್ ಬರದಿರುವ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಹೊಲದ ಬಳಿಗೆ ತೆರಳಿದಾಗ ತೇಗದ ಮರಗಳ ಬಳಿ ಸುಟ್ಟುಕರಕಲಾದ ಪುಟ್ಟಸ್ವಾಮಿಗೌಡರ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲಿಸರು ಭೆಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶಾಸಕ ಎಚ್.ಕೆ. ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಡ್ಜ್ ವಿರುದ್ಧವೇ ಬಂಧನ ವಾರಂಟ್!