ಸರ್ಕಾರದ ರಣಹೇಡಿತನದಿಂದ ಮತಾಂಧರು ಬಾಲ ಬಿಚ್ಚುತ್ತಿದ್ದಾರೆ: ಬಿಜೆಪಿ

Sampriya
ಮಂಗಳವಾರ, 24 ಸೆಪ್ಟಂಬರ್ 2024 (15:52 IST)
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್  ಸರ್ಕಾರದ ರಣಹೇಡಿತನ ನೋಡಿ ಮತಾಂಧರು ಬಾಲ ಬಿಚ್ಚುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ವೋಟ್‌ಬ್ಯಾಂಕ್‌ಗಾಗಿ ಹಿಂದೂಗಳನ್ನೇ ಟಾರ್ಗೆಟ್‌ ಮಾಡಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ.

ಧಾರವಾಡ ಪಾಲಿಕೆ ಜಾಗದಲ್ಲಿ ಹಿಂದೂ ಮುಸ್ಲಿಂ ಬೋರ್ಡ್ ಜಟಾಪಟಿ ವಿಚಾರವಾಗಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ಹೊರಹಾಕಿದೆ.

ಹಲವು ವರ್ಷದಗಳಿಂದ ಒಂದು ಮರದ ಕೆಲಗೆ ಹನುಮಂತ, ಕರಿಯಮ್ಮ ಹಾಗೂ ನಾಗದೇವರುಗೆ ಪೂಜೆ ನಡೆಯುತ್ತಿದೆ. ಪಕ್ಕದ ಗಿಡದ ಕೆಳಗೆ ಮೆಹಬೂಬ ಸುಬಾನಿ ದರ್ಗಾದ ಕಲ್ಲು ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಪೋಸ್ಟ್‌ನಲ್ಲಿ ಹೀಗಿದೆ: ರಾಜ್ಯದಲ್ಲಿ ಕಾಂಗ್ರೆಸ್  ಸರ್ಕಾರದ ರಣಹೇಡಿತನ ನೋಡಿ ಮತಾಂಧರು ಬಾಲ ಬಿಚ್ಚುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ವೋಟ್‌ಬ್ಯಾಂಕ್‌ಗಾಗಿ ಹಿಂದೂಗಳನ್ನೇ ಟಾರ್ಗೆಟ್‌ ಮಾಡಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ.

ಧಾರವಾಡ ಮಹಾನಗರ ಪಾಲಿಕೆಯ ಸೂಪರ್ ಮಾರ್ಕೆಟ್‌ನ ಒಂದು ಜಾಗದಲ್ಲಿ ಕಳೆದ 50 ವರ್ಷಗಳಿಂದ ಹಿಂದೂಗಳು ಅರಳಿ ಮರದ ಕೆಳಗಿದ್ದ ಹನುಮಂತ, ಕರಿಯಮ್ಮ, ನಾಗದೇವರನ್ನು ಪೂಜಿಸಿಕೊಂಡು ಬರುತ್ತಿದ್ದರು.

ಆದರೆ ಕೆಲವು ಮತಾಂಧ ಕಿಡಿಗೇಡಿಗಳು ಅದೇ ಜಾಗದಲ್ಲಿ ಏಕಾಏಕಿ ಮಹೆಬೂಬ್ ಸಾಬ್ ದರ್ಗಾದ ಕಲ್ಲು ತಂದಿಟ್ಟು ಗಲಾಟೆ ಎಬ್ಬಿಸಿದ್ದಾರೆ.

ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ತುಷ್ಟೀಕರಣ ರಾಜಕೀಯದ ಪುಕ್ಕಲುತನ ನೋಡಿ ನಾಳೆ ಸಿದ್ದರಾಮನ ಹುಂಡಿಯ ದೇವಸ್ಥಾನದಲ್ಲೂ ಮತಾಂಧರು ಇದೇ ರೀತಿ ಕಲ್ಲು ತಂದು ಇಟ್ಟರೂ ಅಚ್ಚರಿಯಿಲ್ಲ.

<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ನೆರೆಹೊರೆಯಲ್ಲಿರುವ ಸಾಬರ ಬಗ್ಗೆಯೂ ಎಚ್ಚರಿಕೆಯಿಂದಿರಿ: ಪ್ರತಾಪ್ ಸಿಂಹ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ನನ್ನ ಮಗಳು ಹಾಗೆಲ್ಲಾ ಮಾಡಲ್ಲ: ಉಗ್ರ ಮಹಿಳಾ ನಾಯಕಿ ಡಾ ಶಾಹೀನ್ ತಂದೆಯ ವಾದ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಬಸವನಗುಡಿ ಕಡಲೆಕಾಯಿ ಪರಿಷೆ ಯಾವಾಗ ಆರಂಭ, ಈ ಬಾರಿ ಹೊಸ ನಿಯಮವೇನು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments