Select Your Language

Notifications

webdunia
webdunia
webdunia
webdunia

ಮದುವೆಯಾಗುವುದಾಗಿ ನಂಬಿಸಿ ವಂಚನೆ: ಶಾಸಕ ಪ್ರಭು ಚವಾಣ್ ಪುತ್ರನ ವಿರುದ್ಧ ಯುವತಿ ದೂರು

ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ಪ್ರಕರಣ

Sampriya

ಔರಾದ್ , ಶುಕ್ರವಾರ, 18 ಜುಲೈ 2025 (18:20 IST)
Photo Credit X
ಔರಾದ್ (ಬೀದರ್‌ ಜಿಲ್ಲೆ): ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವುದಾಗಿ ಶಾಸಕ ಪ್ರಭು ಚವಾಣ್ ಅವರ ಮಗ ಪ್ರತೀಕ್ ಚವಾಣ್ ವಿರುದ್ಧ ಆರೋಪ ಕೇಳಿಬಂದಿದೆ. 

ಶಾಸಕ, ಅವರ ಪುತ್ರ ಹಾಗೂ ಕುಟುಂಬ ಸದಸ್ಯರ ವಿರುದ್ಧ ಮದುವೆ ನಿರಾಕರಣೆಯ ಸಂಬಂಧ ಮಹಾರಾಷ್ಟ್ರದ ದೇಗಲೂರ ತಾಲ್ಲೂಕಿನ ಸೇವಾದಾಸ ನಗರ ತಾಂಡಾದ ಯುವತಿಯೊಬ್ಬರು ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯದ ಗೃಹ ಸಚಿವರಿಗೆ ದೂರು ನೀಡಿದ್ದಾರೆ.

2023ರ ಡಿಸೆಂಬರ್ 25ರಂದು ಔರಾದ್‌ ತಾಲ್ಲೂಕಿನ ಬೋಂತಿಯ ಘಮಸುಬಾಯಿ ತಾಂಡಾದಲ್ಲಿ ಶಾಸಕ ಅವರ ಪುತ್ರ ಪ್ರತೀಕ್ ಚವಾಣ್ ಜತೆ ಎಲ್ಲರ ಸಮ್ಮುಖದಲ್ಲಿ ನನ್ನ ನಿಶ್ಚಿತಾರ್ಥವಾಗಿದೆ. 
ನಿಶ್ಚಿತಾರ್ಥದ ಬಳಿಕ ನಾವಿಬ್ಬರೂ ಮಹಾರಾಷ್ಟ್ರ ದೇವಸ್ಥಾನ ಸೇರಿ ವಿವಿಧೆಡೆ ಸುತ್ತಾಡಲು ಹೋಗಿದ್ದೇವು. 

ಈ ವೇಳೆ ಪ್ರತೀಕ್ ನನ್ನ ಜತೆ ದೈಹಿಕ ಸಂಬಂಧ ಬೆಳೆಸಿದ್ದಾರೆ. ನನ್ನ ಪಾಲಕರು ಮದುವೆ ಸಂಬಂಧ ಮಾತನಾಡಲು ಹೋದಾಗ ಅವರೊಂದಿಗೆ ಜಗಳವಾಡಿದ್ದಾರೆ. ದೂರು ಕೊಡಲು ಹೋದರೆ ಪೊಲೀಸರು ಸ್ವೀಕರಿಸಿಲ್ಲ. ನನ್ನ ಹಾಗೂ ನನ್ನ ಕುಟುಂಬಕ್ಕೆ ಅನ್ಯಾಯ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು, ಬೆಚ್ಚಿಬೀಳಿಸುವಂತಿತ್ತು ಕನಿಷ್ಠ 40 ಖಾಸಗಿ ಶಾಲೆಗಳಿಗೆ ಕಳುಹಿಸಿದ ಬಾಂಬ್ ಬೆದರಿಕೆ ಸಂದೇಶ