Select Your Language

Notifications

webdunia
webdunia
webdunia
webdunia

ಧರ್ಮಸ್ಥಳವನ್ನೇ ನಡುಗಿಸಿದ ಯೂಟ್ಯೂಬರ್‌ ಸಮೀರ್‌ಗೆ ಇದೀಗ ಮುಖ ತೋರಿಸದ ಪರಿಸ್ಥಿತಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ

Sampriya

ಬೆಂಗಳೂರು , ಗುರುವಾರ, 21 ಆಗಸ್ಟ್ 2025 (16:14 IST)
Photo Credit X
ಬೆಂಗಳೂರು: ಧರ್ಮಸ್ಥಳದ  ಬಗ್ಗೆ ಎಐ ವಿಡಿಯೋ ಮುಖಾಂತರ ಅಪಪ್ರಚಾರ ಮಾಡಿದ್ದಕ್ಕೆ ಯೂಟ್ಯೂಬರ್‌ ಸಮೀರ್ ಬಂಧನ ಭೀತಿ ಹಿನ್ನೆಲೆ, ಇದೀಗ ಬೆಂಗಳೂರು ನಗರವನ್ನು ತೊರೆದಿರುವುದು ಬೆಳಕಿಗೆ ಬಂದಿದೆ. 

ಕಳೆದ ಎರಡು ದಿನದಿಂದ  ಪೊಲೀಸರು ಹುಡುಕುತ್ತಿದ್ದಾರೆಂದು ತಿಳಿದು ಮೊಬೈಲ್‌ ಅನ್ನು ಬೆಂಗಳೂರಿನ ಮನೆಯಲ್ಲಿ ಬಿಟ್ಟು, ನಾಪತ್ತೆಯಾಗಿದ್ದಾನೆ. 

ನಿನ್ನೆ ಪೊಲೀಸರು ಮೊಬೈಲ್ ಲೋಕೇಶನ್ ಆಧರಿಸಿ ಹುಡುಕಾಟ ನಡೆಸಿದಾಗ ಬೆಂಗಳೂರಿನಲ್ಲಿ ಸುತ್ತಾ ಲೋಕೇಷನ್ ತೋರಿಸಿತ್ತು. ಸಂಜೆ ವೇಳೆ ಜಿಗಿಣಿ ಬಳಿ ಲೋಕೇಶನ್ ತೀರಿಸಿದ್ದರಿಂದ ಅದನ್ನು ಆಧರಿಸಿ ಪೊಲೀಸರು ಸ್ಥಳಕ್ಕೆ ಹೋದಾಗ ಆತ ಮೊಬೈಲ್ ಬಿಟ್ಟು ಮಂಗಳೂರಿನ ಕಡೆ ಪ್ರಯಾಣ ಬೆಳೆಸಿರುವುದಾಗಿ ಆತನ ಮನೆಯವರು ಹೇಳಿದ್ದಾರೆ. 

ಒಟ್ಟಾರೆ ಧರ್ಮಸ್ಥಳ ಪ್ರಕರಣದಲ್ಲಿ ಬಂಧನ ಭೀತಿಯಿರುವುದರಿಂದ ಸಮೀರ್ ಇದೀಗ ಪೊಲೀಸರ ಕಣ್ಣು ತಪ್ಪಿಸಿ ಓಡಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. 

ಇನ್ನೂ ಬಂಧನದ ಸಾಧ್ಯತೆಯಿಂದ 2ದಿನಗಳ ಹಿಂದೆಯೇ ತನ್ನ ವಕೀಲರ ಮುಖಾಂತರ ಸಮೀರ್  ನಿರೀಕ್ಷಾ ಜಾಮೀನು ಅರ್ಜಿಯನ್ನ ಸಲ್ಲಿಸಿದ್ದ. ಅದರ ವಿಚಾರಣೆ ಇನ್ನೇನು ನಡೆದು, ತೀರ್ಪು ಹೊರಬೀಳಲಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕಪಾಳಮೋಕ್ಷದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಸಿಎಂ ರೇಖಾ ಗುಪ್ತಾ