ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಜೊತೆ ‘ನಿರ್ಗಮನ ಭೇಟಿ’ ಸಹಭಾಗಿತ್ವ ಮುಂದುವರಿಕೆ

Webdunia
ಗುರುವಾರ, 7 ಅಕ್ಟೋಬರ್ 2021 (20:33 IST)
ಬೆಂಗಳೂರು: ನಗರದಲ್ಲಿ ಬ್ರಿಟನ್ ಉಪ ಹೈ-ಕಮಿಷನರ್ ಆಗಿರುವ ಜೆರೆಮಿ ಪಿಲ್ಮೋರ್-ಬೆಡ್‌ಫೋರ್ಡ್ ಅವರು ಐಟಿ/ಬಿಟಿ ಸಚಿವರೂ ಆಗಿರುವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ವಿಕಾಸಸೌಧದಲ್ಲಿ ಗುರುವಾರ ಭೇಟಿಯಾಗಿ ಸೈಬರ್ ಭದ್ರತೆ, ದೂರಸಂಪರ್ಕ ಸೇರಿದಂತೆ ಗುರುತಿಸಲಾಗಿರುವ ಆಯ್ದ ಕ್ಷೇತ್ರಗಳಲ್ಲಿ ಸಹಭಾಗಿತ್ವ ಮುಂದುವರಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
 
ಜೆರೆಮಿ ಫಿಲ್ಮೋರ್ ಅವರು ತಾವು ಬ್ರಿಟನ್‌ಗೆ ವಾಪಸ್ ತೆರಳುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಾಡಿದರು. ಸಂಶೋಧನೆ ಮತ್ತು ಅಭಿವೃದ್ಧಿ, ವಿದ್ಯುತ್ ಚಾಲಿತ ವಾಹನಗಳ ಕಾರ್ಯನೀತಿ, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಕೆಲವಾರು ವಿಷಯಗಳ ಕುರಿತೂ ಮಾತುಕತೆ ನಡೆಯಿತು.
 
ಎರಡು ದೇಶಗಳ ನಡುವೆ ಪರಸ್ಪರ ಸಹಭಾಗಿತ್ವಕ್ಕಾಗಿ 2019ರ ಅಕ್ಟೋಬರ್‌ನಲ್ಲಿ ನಾಲ್ಕು ವಲಯಗಳನ್ನು- ಫೀನ್‌ಟೆಕ್, ಕೃತಕ ಬುದ್ಧಿಮತೆ, ತ್ಯಾಜ್ಯ ವಿಲೇವಾರಿ ಮತ್ತು ಸಂಚಾರ zಟ್ಟಣೆ ನಿವಾರಣೆ- ಗುರುತಿಸುವಲ್ಲಿ ಇವರಿಬ್ಬರು ಮುಖ್ಯ ಪಾತ್ರ ನಿರ್ವಹಿಸಿದ್ದರು. ಜೊತೆಗೆ, ನವೋದ್ಯಮಗಳನ್ನು ಉತ್ತೇಜಿಸಲು ‘ಗೋ ಗ್ಲೋಬಲ್’ ಕಾರ್ಯಕ್ರಮಕ್ಕೆ ಚಾಲನೆ ನೀಡುವಲ್ಲಿ ಹಾಗೂ ರೆಗ್ಯುಲೇಟರಿ ಸ್ಯಾಂಡ್ ಬಾಕ್ಸ್ಗಳ ಸ್ಥಾಪನೆಗೆ ಮುಂದಾಗುವಲ್ಲಿ ಈ ಇಬ್ಬರು ನಾಯಕರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
 
ನವದೆಹಲಿಯಲ್ಲಿ ಬ್ರಿಟಿಷ್ ಹೈಕಮಿಷನ್‌ನ ಮಿನಿಸ್ಟರ್ ಕೌನ್ಸಿಲರ್ ಆಗಿರುವ ಕೇಟಿ ಬಡ್ಜ್ ಅವರೂ ಈ ಭೇಟಿ ವೇಳೆ ಜೊತೆಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಸಿಎಂ ಆದ ಮೇಲೆ ಭಿನ್ನಾಭಿಪ್ರಾಯವಾಗಬಾರದು ಎಂದು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್

ರಾಜ್ಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಗವರ್ನರ್‌ ಭೇಟಿ ಮಾಡಿದ ಭಾವಿ ಸಿಎಂ ಡಿ.ಕೆ. ಶಿವಕುಮಾರ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಬೆಂಗಳೂರು ಮಳೆಗೆ ರಸ್ತೆ ದಾಟಲು ಕಷ್ಟಪಡುತ್ತಿದ್ದ ವಿಕಲಚೇತನನ್ನು ನೋಡಿ ಪೊಲೀಸ್ ಅಧಿಕಾರಿ ಮಾಡಿದ್ದೇನು Video

ಪ್ರಾಣ ಪಣಕ್ಕಿಟ್ಟು ಮಗುವನ್ನು ವಿದ್ಯುತ್ ಆಘಾತದಿಂದ ಕಾಪಾಡಿದ ಶ್ವಾನ: ವಿಡಿಯೋ ವೈರಲ್

ಮುಂದಿನ ಸುದ್ದಿ
Show comments