Select Your Language

Notifications

webdunia
webdunia
webdunia
webdunia

ಅಬಕಾರಿ ಇಲಾಖೆ ಹಗರಣ- ಕಿಕ್ ಬ್ಯಾಕ್ ಪಡೆದ ಆರೋಪ ಎದುರಿಸುತ್ತಿರುವ ಸಚಿವ ಕೆ ಗೋಪಾಲಯ್ಯ

ಅಬಕಾರಿ ಇಲಾಖೆ ಹಗರಣ- ಕಿಕ್ ಬ್ಯಾಕ್ ಪಡೆದ ಆರೋಪ ಎದುರಿಸುತ್ತಿರುವ ಸಚಿವ ಕೆ ಗೋಪಾಲಯ್ಯ
hasana , ಶುಕ್ರವಾರ, 14 ಅಕ್ಟೋಬರ್ 2022 (19:24 IST)
ಅಬಕಾರಿ ಸಚಿವ ಗೋವಾ ಬಂದರು ಮೂಲಕ ಕಾಕಂಬಿ ರಫ್ತಿಗೆ ಕಿಕ್ ಬ್ಯಾಕ್ ಪಡೆದ ಆರೋಪ ಎದುರಿಸುತ್ತಿದ್ದಾರೆ.ಹೀಗಾಗಿ ಇದೇ ವಿಷಯವಾಗಿ ಸಚಿವ ಗೋಪಾಲಯ್ಯ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದಾರೆ.
 
ಕಾಕಂಬಿ ರಫ್ತನ್ನ ಇಲ್ಲಿಯವರಿಗೂ ಕೊಡುವ ಅವಕಾಶ ಇದೆ.ಹೊರಗಿನವರಿಗೆ ಕೊಡುವ ಅವಕಾಶ ಇದೆ.ನನ್ನ ಇಲಾಖೆಯಿಂದ ಈ ರೀತಿಯ ಆದೇಶ ಹೊರಬಿದ್ದಿಲ್ಲ.ಆ ತರಹದ ಆದೇಶದ ಬಗ್ಗೆ ನನಗೆ ಯಾವುದೇ ಮಾಹಿತಿಯೂ‌ ಇಲ್ಲ.ನಾನು ಜಿಲ್ಲಾ ಪ್ರವಾಸದಲ್ಲಿದ್ದೇನೆ‌, ೧೬ ನೇ ತಾರೀಖಿನಂದು ಬೆಂಗಳೂರಿಗೆ ಹೋಗುತ್ತೇನೆ.ನಂತರ ಈ ರೀತಿ ಸುದ್ದಿ ಯಾಕೆ ಹಬ್ಬಿದೆ ಎಂದು ಪರಿಶೀಲಿಸುತ್ತೇನೆ ಎಂದು ಸಚಿವ ಕೆ ಗೋಪಾಲಯ್ಯ ಹೇಳಿದಾರೆ.ನನ್ನ ವಿರುದ್ಧ ಕೇಳಿ ಬಂದಿರುವ ಕಿಕ್ ಬ್ಯಾಕ್ ಹಗರಣ ಸತ್ಯಕ್ಕೆ ದೂರದ ವಿಚಾರವಾಗಿದೆ.ನಾನು ಯಾವುದೇ ಕಿಕ್ ಬ್ಯಾಕ್ ಪಡೆದಿಲ್ಲ, ಇದು ಶುದ್ಧ ಸುಳ್ಳು.ನನ್ನ ಇಲಾಖೆಯ ಅಧಿಕಾರಿಗಳೂ ಈ ರೀತಿ‌ ಕೆಲಸ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನಕ್ಕೆ ಬಾಂಬ್​​ ಬೆದರಿಕೆ ಕರೆ