Select Your Language

Notifications

webdunia
webdunia
webdunia
webdunia

ವಿದ್ಯಾವಂತರು ರಾಜಕೀಯಕ್ಕೆ ಬರದಿದ್ರೆ ಅಯೋಗ್ಯರು ಆಳುತ್ತಾರೆ: ಎಚ್.ಸಿ.ನೀರಾವರಿ

ವಿದ್ಯಾವಂತರು ರಾಜಕೀಯಕ್ಕೆ ಬರದಿದ್ರೆ ಅಯೋಗ್ಯರು ಆಳುತ್ತಾರೆ: ಎಚ್.ಸಿ.ನೀರಾವರಿ
ಬೆಂಗಳೂರು , ಗುರುವಾರ, 20 ಏಪ್ರಿಲ್ 2017 (15:48 IST)
ವಿದ್ಯಾವಂತರು, ಬುದ್ದಿವಂತರು ರಾಜಕೀಯಕ್ಕೆ ಬರಬೇಕು. ಇಲ್ಲಾಂದ್ರೆ ಅಯೋಗ್ಯರು ನಮ್ಮನ್ನು ಆಳುತ್ತಾರೆ. ಅಂತಹ ಪರಿಸ್ಥಿತಿ ಇಂದು ರಾಜ್ಯಕ್ಕೆ ಬಂದೊದಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಸಿ.ನೀರಾವರಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
 
ವಯಸ್ಸಾಗಿದ್ದರಿಂದ ರಾಜಕೀಯದಿಂದ ದೂರವಿದ್ದೆ. ಇದೀಗ ಜೆಡಿಎಸ್ ವರಿಷ್ಠ ದೇವೇಗೌಡರ ಒತ್ತಾಸೆಯಿಂದಾಗಿ ಜೆಡಿಎಸ್ ಪಕ್ಷಕ್ಕೆ ಮರಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
 
ನನ್ನ ಮುಂದಿನ ರಾಜಕಾರಣವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆಯೇ ಜನತೆಯ ಸೇವೆಗಾಗಿ ಮೀಸಲಿಡಬೇಕು ಎಂದು ಬಯಸಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರೊಂದಿಗೆ ಪ್ರಚಾರ ಕಾರ್ಯಕೈಗೊಳ್ಳುವುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಸಿ.ನೀರಾವರಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಸಾಲ ಮನ್ನಾ ಬಗ್ಗೆ ಬಿಎಸ್‌ವೈ ಏಕೆ ಪ್ರಧಾನಿಯನ್ನು ಕೇಳುತ್ತಿಲ್ಲ: ಮಧು ಬಂಗಾರಪ್ಪ