ಮೈಸೂರಿಗೆ ಮಾತ್ರವಲ್ಲ, ಇಡೀ ಮೈಸೂರಿಗೇ ಸಿದ್ದರಾಮಯ್ಯ ಹೆಸರಿಟ್ಟರೂ ತಪ್ಪಿಲ್ಲ ಎಂದ ಮಾಜಿ ಶಾಸಕ

Krishnaveni K
ಮಂಗಳವಾರ, 31 ಡಿಸೆಂಬರ್ 2024 (16:15 IST)
ಮೈಸೂರು: ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ವಿವಾದವಾಗುತ್ತಿರುವ ಬೆನ್ನಲ್ಲೇ ಮಾಜಿ ಶಾಸಕ ಸೋಮಶೇಖರ್ ಮೈಸೂರಿಗೇ ಸಿದ್ದರಾಮಯ್ಯ ಹೆಸರಿಟ್ಟರೂ ತಪ್ಪಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಮೈಸೂರಿನ ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಲು ತೀರ್ಮಾನ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ರಾಜ ಮಹಾರಾಜರು ನಿರ್ಮಿಸಿದ ಮೈಸೂರಿನ ರಸ್ತೆಯೊಂದಕ್ಕೆ ಹಗರಣದಲ್ಲಿ ಕಳಂಕಿತರಾಗಿರುವ ಸಿದ್ದರಾಮಯ್ಯ ಹೆಸರು ಇಡುವುದು ಯಾಕೆ ಎಂದು ಬಿಜೆಪಿ ಮತ್ತು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಮೈಸೂರಿನಲ್ಲಿ ಮಾಜಿ ಶಾಸಕ ಎಂಕೆ ಸೋಮಶೇಖರ್ ಮೈಸೂರು ರಸ್ತೆಗೆ ಮಾತ್ರವಲ್ಲ, ಇಡೀ ಮೈಸೂರಿಗೇ ಸಿದ್ದರಾಮಯ್ಯ ಹೆಸರಿಟ್ಟರೂ ತಪ್ಪಿಲ್ಲ. ಮೈಸೂರಿಗೆ ಸಿದ್ದರಾಮಯ್ಯ ಅಷ್ಟೊಂದು ಅಭಿವೃದ್ಧಿ ಮಾಡಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.

ಮೈಸೂರಿನ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದಕ್ಕೆ ವಿವಾದವಾಗುತ್ತಿರುವುದೇ ಅಚ್ಚರಿಯಾಗುತ್ತಿದೆ. ನಾಲ್ವಡಿ ಕೃಷ್ಣ ರಾಜ ಒಡೆಯರ್ ಆದ ಮೇಲೆ ಮೈಸೂರಿಗೆ ಇಷ್ಟೊಂದು ಅಭಿವೃದ್ಧಿ ಮಾಡಿರುವುದು ಸಿದ್ದರಾಮಯ್ಯನವರೇ. ಹೀಗಾಗಿ ಅವರ ಹೆಸರಿಟ್ಟರೆ ತಪ್ಪಿಲ್ಲ. ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಸಿದ್ದರಾಮಯ್ಯ ಅಷ್ಟು ಪ್ರಯತ್ನ ಪಟ್ಟಿದ್ದಾರೆ ಎಂದು ಸೋಮಶೇಖರ್ ಹಾಡಿ ಹೊಗಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಸ್ತೆ ಮಾಡಿದ್ರೆ ಬಡವರು ಉದ್ದಾರವಾಗಲ್ಲ ಎಂದ ಪರಮೇಶ್ವರ್: ಉದ್ದಾರವಾಯ್ತು ಕನ್ನಡ ನಾಡು ಎಂದ ಅಶೋಕ್

ಇನ್ ಸ್ಟಾಗ್ರಾಂ ಫಾಲೋವರ್ ಸಂಖ್ಯೆ ಹೆಚ್ಚು ಮಾಡೋದು ಹೇಗೆ

ಮುಸ್ಲಿಂ ಮಹಿಳೆಯ ಹಿಜಾಬ್ ಎಳೆದ ಬಿಹಾರ ಸಿಎಂ ನಿತೀಶ್ ಕುಮಾರ್: ವಿಡಿಯೋ ವೈರಲ್

ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಬಂತು ಸ್ಪಷ್ಟ ಸಂದೇಶ

ಸದನಕ್ಕೆ ಟಿ ಶರ್ಟ್ ಧರಿಸಿ ಬರಬೇಡಿ ಎಂದ ಸ್ಪೀಕರ್ ಖಾದರ್: ರಾಹುಲ್ ಗಾಂಧಿ ಹೀಗೇ ಬರ್ತಾರಲ್ವಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments