Webdunia - Bharat's app for daily news and videos

Install App

DGP Om Prakash Rao: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಪತ್ನಿ ಪಲ್ಲವಿ ಮೇಲೆ ಅನುಮಾನ ಬಂದಿದ್ದು ಈ ಮೂರು ಕಾರಣಕ್ಕೆ

Krishnaveni K
ಸೋಮವಾರ, 21 ಏಪ್ರಿಲ್ 2025 (08:33 IST)
Photo Credit: X
ಬೆಂಗಳೂರು: ಡಿಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪತ್ನಿ ಪಲ್ಲವಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪತ್ನಿ ಮೇಲೆ ಅನುಮಾನ ಬರಲು ಈ ಮೂರು ವಿಚಾರಗಳೇ ಪ್ರಮುಖ ಕಾರಣವಾಗಿದೆ.

ಆಸ್ತಿ ವಿವಾದ
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಒಂದು ಮನೆಯನ್ನು ತಮ್ಮ ತಂಗಿ ಹೆಸರಿಗೆ ಮಾಡಿದ್ದರು. ಇದಕ್ಕೆ ಪತ್ನಿ ಪಲ್ಲವಿ ಆಕ್ಷೇಪಿಸಿದ್ದರು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ತನ್ನ ತಂಗಿ ಬಗ್ಗೆ ಮಾತನಾಡದಂತೆ ಓಂ ಪ್ರಕಾಶ್ ತಾಕೀತು ಮಾಡಿದ್ದರಂತೆ. ಹಾಗಿದ್ದರೂ ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಮುಂದುವರಿದೇ ಇತ್ತು.

ಫ್ಯಾಮಿಲಿ ಗ್ರೂಪ್ ನಲ್ಲಿ ಮೆಸೇಜ್
ಐಪಿಎಸ್ ಅಧಿಕಾರಿಗಳ ಫ್ಯಾಮಿಲಿ ವ್ಯಾಟ್ಸಪ್ ಗ್ರೂಪ್ ನಲ್ಲಿ ಕೆಲವು ದಿನಗಳ ಹಿಂದೆ ಪಲ್ಲವಿ ಒಂದು ಮೆಸೇಜ್ ಹಾಕಿದ್ದರಂತೆ. ನನ್ನ ಗಂಡ ಮನೆಯಲ್ಲಿಯೇ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಮ್ಮನ್ನೇ ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರ ವಿರುದ್ಧ ಸುಮೊಟೊ ಕೇಸ್ ದಾಖಲಿಸುವಂತೆ ಪಲ್ಲವಿ ಮನವಿ ಮಾಡಿದ್ದರು.

ನಿವೃತ್ತ ಅಧಿಕಾರಿ ಪತ್ನಿಗೆ ಕರೆ
ಓಂ ಪ್ರಕಾಶ್ ಗೆ ಬರ್ಬರವಾಗಿ ಇರಿದ ಪಲ್ಲವಿ ಅವರು ಸಾವನ್ನಪ್ಪುವವರೆಗೂ ನೋಡುತ್ತಾ ನಿಂತಿದ್ದರು ಎನ್ನಲಾಗಿದೆ. ಗಂಡ ಸಾವನ್ನಪ್ಪಿದ ಬಳಿಕ ನಿವೃತ್ತ ಡಿಜಿ ಆಂಡ್ ಐಜಿಪಿಯ ಪತ್ನಿಗೆ ಕರೆ ಮಾಡಿ ‘ಐ ಹ್ಯಾವ್ ಫಿನಿಶ್ಡ್ ಮಾನ್ ಸ್ಟರ್’ ಎಂದು ಹೇಳಿದ್ದರು ಎನ್ನಲಾಗಿದೆ.

ಈ ಮೂರು ಪ್ರಮುಖ ಕಾರಣಗಳು ಪಲ್ಲವಿಯ ಮೇಲೆ ಪೊಲೀಸರಿಗೆ ಸಂಶಯ ಮೂಡುವಂತೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚುನಾವಣಾ ರಾಜಕಾರಣಕ್ಕೆ ಸೋಮಣ್ಣ ನಿವೃತ್ತಿ: ದೇವರೇ ಹೇಳಿದರೂ ಸ್ಪರ್ಧಿಸಲ್ಲ ಎಂದು ಕೇಂದ್ರ ಸಚಿವ

Karnataka Weather: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಏಲ್ಲೆಲ್ಲಿ ಮಳೆ ಸಾಧ್ಯತೆ ಇಲ್ಲಿದೆ ಮಾಹಿತಿ

ಟ್ರಾಫಿಕ್‌ ಫೈನ್‌ ಆಫರ್‌ಗೆ ರಾಜಧಾನಿಯಲ್ಲಿ ಭರ್ಜರಿ ರೆಸ್ಪಾನ್ಸ್‌: ಮೊದಲ ದಿನ ವಸೂಲಿಯಾದ ದಂಡವೆಷ್ಟು ಗೊತ್ತಾ

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ತೆರಳುತ್ತಿದ್ದ ಎಂಟು ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಬಲಿ

ಷರತ್ತುಬದ್ಧ ಜಾಮೀನು ಪಡೆದ ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಬಂಧನದ ಭೀತಿ

ಮುಂದಿನ ಸುದ್ದಿ
Show comments