Webdunia - Bharat's app for daily news and videos

Install App

ಕಾಂಗ್ರೆಸ್ ಸದಸ್ಯರಲ್ಲೇ ಪರ ವಿರೋಧ ವ್ಯಕ್ತವಾಗಿ ಸಭೆಗೆ ಗೈರು

Webdunia
ಮಂಗಳವಾರ, 20 ಸೆಪ್ಟಂಬರ್ 2022 (21:31 IST)
ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಾರ್ಡ್ ಗಳ ಜ್ವಲಂತ ಸಮಸ್ಯೆ ಹಾಗೂ ಅಗತ್ಯ ಕಾಮಗಾರಿಗಳ ಕ್ರಿಯಾಯೋಜನೆ ಮಂಜೂರಾತಿ ನೀಡ ಬೇಕಾದ ಸಭೆ ಸದಸ್ಯರು ಗೈರು ಹಾಜರಾದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.
 
ಹೌದು ಇದು ಚಳ್ಳಕೆರೆ ನಗರಸಭೆ ಅಧ್ಯಕ್ಷೆ ಸುಮಕ್ಕ ಇವರ ಅಧ್ಯಕ್ಷತೆಯಲ್ಲಿ ಸೆ.೧೨ ರಂದು ನಡೆಯಬೇಕಿದ್ದ ಕೌನ್ಸಿಲ್ ಸಾಮಾನ್ಯಸಭೆಯಲ್ಲಿ ಆಡಳಿತಾತ್ಮಕ ತಾಂತಿಕ ಕಾರಣದಿಂದ ಸೆ.೧೯ ಕ್ಕೆ ಸಾಮಾನ್ಯಸಭೆಯನ್ನು ಮುಂದೂಡಲಾಗಿತ್ತು ಸೋಮವಾರ  ೧೧ ಗಂಟೆಗೆ ನಡೆಯ ಬೇಕಿದ್ದ ಸಾಮಾನ್ಯ ಸಭೆಗೆ ಆಡಳೀತ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಸಭೆಗೆ ಬಂದಿದ್ದರು.
 
ಕಾಂಗ್ರೆಸ್ ಪಕ್ಷದಸದಸ್ಯರು ಕೆಲವರು ಒಳಗೆ ಬಾರದೆ ಹೊಗಿನಿಂದಲೇ ದೂರವಾಣಿ ಮೂಲಕ ಒಳಗಿರುವ ಸದಸ್ಯರನ್ನು ಸಭೆಯಿಂದ ಕರೆದು ಸಭೆಗೆ ಕೋರಂ ಇಲ್ಲದ ಕಾರಣ ಮಧ್ಯಾಹ್ನ ೧.೩೦ ರ ನಂತರ ಸಭೆಯನ್ನು ರದ್ದು ಪಡಿಸಿ ಮುಂದೂಡಲಾಗಿದೆ.
 
ಜೆಡಿಎಸ್‌ಸದಸ್ಯರ ವಿ.ವೈ.ಪ್ರಮೋದ್ ಮಾತನಾಡಿ ನಗರದ ೩೧ ವಾರ್ಡ್ಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು ಕ್ರಿಯಾ ಯೋಜನೆ ರೂಪಿಸಿ ಸಭೆಯಲ್ಲಿ ಅನುಮೋದನೆ ಪಡೆದು ಟೆಂಡರ್ ಪ್ರಕಿಯೆಗೆ ಕಳಿಸ ಬೇಕು ಅಭಿವೃದ್ಧಿ ವಿಷದಲ್ಲಿ ಪಕ್ಷ ಬೇದ ಮರೆತು ನಗರದ ಅಭಿವೃದ್ಧಿಗೆ ಶ್ರಮಿಸ ಬೇಕು ಆದರೆ ಕಾಂಗ್ರೆಸ್ ಪಕ್ಷದ ಆಡಳೀತ ಪಕ್ಷದಲ್ಲಿ ಬಣಗಳಿದ್ದು ಹೊಯ್ಸಳ ಬ್ಯಾಂಕ್ ವಿಷಯ ಸಭೆಗೆ ಬಂದಿರುವ ಕಾರಣ ಆಡಳಿತ ಪಕ್ಷದ ಸದಸ್ಯರೇ ಸಭೆ ಗೈರು ಹಾರಜಾರಿಯಾಗಿರುವುದು ನಗರದ ಅಭಿವೃದ್ಧಿಗೆ ಕುಂಠಿತವಾಗುವಂತೆ ಮಾಡಿದ್ದಾರೆ.
 
ಬಿಜೆಪಿ ನಾಮನಿರ್ದೇಶಕ ಸದಸ್ಯರಾದ ಮನೋಜ್, ಪಾಲನೇತ್ರ,ವೀರೇಶ್, ಇಂದ್ರೇಶ್, ಹಾಗೂ ಹಿರಿಯ ಸದಸ್ಯ ಜಯಣ್ಣ ಸಾಮಾನ್ಯ ಸಭೆಗೆ  ನಗರಸಭೆಗೆ ಸೇರಿದ ಶ್ರೀ ಪಾರ್ಶ್ವನಾಥ ದಿಗಂಬರ ಜೈನ್ ಟ್ರಸ್ಟ್ (ರಿ) (ಹೊಯ್ಸಳ ಬ್ಯಾಂಕ್) ಕಟ್ಟಡವನ್ನು ಕಾರ್ಯಾಲಯದ ಸುಪರ್ದಿಗೆ ಪಡೆಯುವಂತೆ ಆಡಳೀತ ಪಕ್ಷದ ಉಪಾಧ್ಯಕ್ಷೆ ಮಂಜುಳ ಆರ್ ಪ್ರಸನ್ನಕುಮಾರ್ ರವರು ಪತ್ರ ನೀಡಿರುವ ಹಾಗೂ ಸದರಿ ಸ್ವತ್ತಿನ ಲೀಜ್ ಅವಧಿಯು ಮುಕ್ತಾಯವಾಗಿರುವ ಪ್ರಯುಕ್ತ ಕಛೇರಿಯ ವಶಕ್ಕೆ ಪಡೆಯುವಂತೆ ಸಭೆಗೆ ವಿಷದ ತಂದ ಕಾರಣ ಕಾಂಗ್ರೆಸ್ ಸದಸ್ಯರಲ್ಲೇ ಪರ ವಿರೋಧ ವ್ಯಕ್ತವಾಗಿ ಸಭೆಗೆ ಗೈರಾಗಿರುತ್ತಾರೆ ಎರಡು ಬಾರಿಯೂ ಸಭೆ ಮುಂದೂಡಿರುವುದರಿಂದ ಯಾವುದೋ ಒಂದು ವಿಷಯಕ್ಕೆ ನಗರದ ಜ್ವಲಾಂತ ಸಮಸ್ಯೆಗಳಿಗೆ ಅಡ್ಡಿಯಾಗುವಂತೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಅಕ್ರೋಶವ್ಯಕ್ತಪಡಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಉತ್ತರಪ್ರದೇಶ: ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಎಂಜಿನಿಯರ್‌ಗಳು

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

ಮುಂದಿನ ಸುದ್ದಿ
Show comments