Select Your Language

Notifications

webdunia
webdunia
webdunia
webdunia

ಸದ್ಯಕ್ಕೆ ರಾಜಕೀಯ ಪ್ರವೇಶವಿಲ್ಲ: ಸಿಎಂ ಸಿದ್ದು ಪುತ್ರ ಯತೀಂದ್ರ ಸ್ಪಷ್ಟನೆ

ಸದ್ಯಕ್ಕೆ ರಾಜಕೀಯ ಪ್ರವೇಶವಿಲ್ಲ: ಸಿಎಂ ಸಿದ್ದು ಪುತ್ರ ಯತೀಂದ್ರ ಸ್ಪಷ್ಟನೆ
ಮೈಸೂರು , ಸೋಮವಾರ, 29 ಆಗಸ್ಟ್ 2016 (16:57 IST)
ಸದ್ಯಕ್ಕೆ ರಾಜಕೀಯ ಪ್ರವೇಶಿಸುವ ಯಾವುದೇ ಉದ್ದೇಶವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಸ್ಪಷ್ಟಪಡಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಅಣ್ಣ ರಾಕೇಶ್ ಅವರ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತೇನೆ. ಮೈಸೂರಿನಲ್ಲಿ 2-3 ದಿನಗಳ ಕಾಲ ವಾಸ್ತವ್ಯ ಹೂಡಿ, ಜನರ ಅಹವಾಲುಗಳನ್ನು ಸ್ವೀಕರಿಸುತ್ತೇನೆ. ಅವರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ತಿಳಿಸಿದ್ದಾರೆ.
 
ಶೀಘ್ರದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಇರಾದೆಯಿಲ್ಲ. ಉಹಾಪೋಹ ಸುದ್ದಿಗಳತ್ತ ಗಮನಹರಿಸಬೇಡಿ. ರಾಜಕೀಯ ಪ್ರವೇಶಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದ ಪುತ್ರ ರಾಕೇಶ್ ಅವರ ಅಕಾಲಿಕ ನಿಧನದಿಂದಾಗಿ ಸಿಎಂ ಕುಟುಂಬ ಮತ್ತು ಮೈಸೂರು ಕಾಂಗ್ರೆಸ್ ಘಟಕದಲ್ಲಿ ನಿರಾಸೆಯ ಅಲೆ ಮೂಡಿಸಿತ್ತು. ಇದೀಗ ಡಾ.ಯತೀಂದ್ರ ಸಹೋದರ ರಾಕೇಶ್ ಸ್ಥಾನವನ್ನು ತುಂಬಲಿದ್ದಾರೆ ಎನ್ನುವ ಸಂತಸ ಕಾಂಗ್ರೆಸ್ ವಲಯದಲ್ಲಿ ಹರಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಾಡಪಿಸ್ತೂಲ್ ಮಾರಾಟ ಮಾಡುತ್ತಿದ್ದ ಮೂವರ ಬಂಧನ