Select Your Language

Notifications

webdunia
webdunia
webdunia
webdunia

ಯಡಿಯೂರಪ್ಪಗೆ ಸೆಡ್ಡು ಹೊಡೆಯಲು ಈಶ್ವರಪ್ಪ ಮಾಸ್ಟರ್ ಪ್ಲಾನ್

ಯಡಿಯೂರಪ್ಪಗೆ ಸೆಡ್ಡು ಹೊಡೆಯಲು ಈಶ್ವರಪ್ಪ ಮಾಸ್ಟರ್ ಪ್ಲಾನ್
ಬೆಂಗಳೂರು , ಗುರುವಾರ, 4 ಮೇ 2017 (18:54 IST)
ಪ್ರಧಾನಿ ಮೋದಿಯವರ ಕಾರ್ಯಕ್ರಮಗಳನ್ನು ರಾಯಣ್ಣ ಬ್ರಿಗೇಡ್ ಮೂಲಕ ಅಹಿಂದ ವರ್ಗಗಳ ತಲುಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಹಣಿಯಲು ಕೆ.ಎಸ್.ಈಶ್ವರಪ್ಪ ಮಾಸ್ಟರ್‌ ಪ್ಲ್ಯಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ರಾಯಣ್ಣ ಬ್ರಿಗೇಡ್ ಮುಂದುವರಿಸುವುದರೊಂದಿಗೆ ನಮೋ ಯೋಜನೆಗಳನ್ನು ಬ್ರಿಗೇಡ್ ಮೂಲಕ ಜಾರಿಗೆ ತಂದಲ್ಲಿ ಯಡಿಯೂರಪ್ಪಗೆ ಕಡಿವಾಣ ಹಾಕಬಹುದು ಎನ್ನುವ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
 
ಮೋದಿ ರೂಪಿಸಿದ ಕಾರ್ಯಕ್ರಮಗಳಿಗೆ ಬ್ರಿಗೇಡ್ ಬಳಕೆ ಮಾಡಿಕೊಂಡಲ್ಲಿ ಯಡಿಯೂರಪ್ಪ ಬಣವನ್ನು ಹತ್ತಿಕ್ಕಬಹುದು ಎನ್ನುವ ತಂತ್ರವನ್ನು ಬಿಜೆಪಿಯ ರೆಬೆಲ್ ಸ್ಟಾರ್ ಅನುಸರಿಸುವ ಹುನ್ನಾರ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ರಾಯಣ್ಣ ಬ್ರಿಗೇಡ್ ಮೂಲಕ ಅಹಿಂದ ವರ್ಗಗಳನ್ನು ಸೆಳೆದು ಮೋದಿ ಯೋಜನೆಗಳನ್ನು ಮನೆಮನೆಗಳಿಗೆ ತಲುಪಿಸಿ, ಮೋದಿ ಮತ್ತು ಅಮಿತ್ ಶಾ ಮನಗೆದ್ದು, ಯಡಿಯೂರಪ್ಪರನ್ನು ಹಣಿಯಬಹುದು ಎನ್ನುವ ಲೆಕ್ಕಾಚಾರ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರದ್ದಾಗಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರಿ ಭೂಮಿ ನುಂಗಿದ್ರಾ ಸಚಿವ ಎಂ.ಕೃಷ್ಣಪ್ಪ.....?