Select Your Language

Notifications

webdunia
webdunia
webdunia
webdunia

ದಾವಣಗೆರೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವ

ದಾವಣಗೆರೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವ
ದಾವಣಗೆರೆ , ಸೋಮವಾರ, 3 ಏಪ್ರಿಲ್ 2017 (15:30 IST)
ದಾವಣಗೆರೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಮೂಲಗಳು ತಿಳಿಸಿವೆ.
 
ಗಾಂಧಿನಗರದಲ್ಲಿ ಭೂಮಿ, ಮನೆ, ಕಟ್ಟಡಗಳ ಗೋಡೆಗಳು ಬಿರುಕಿ ಬಿಟ್ಟಿವೆ. ಗಾಂಧಿನಗರಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್ ಮತ್ತು ಗಣಿ ಹಾಗೂ ಭೂ ವಿಜ್ಞಾನಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 
ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಭೂಕಂಪನಾ ಮಾಪಕ ಕೇಂದ್ರದಿಂದ ವರದಿ ಬರುತ್ತದೆ. ವರದಿ ಬಂದ ನಂತರ ಖಚಿತವಾಗಿ ಹೇಳಬಹುದಾಗಿದೆ ಎಂದು ಭೂ ವಿಜ್ಞಾನಿ ಮಲ್ಲೇಶ್ ತಿಳಿಸಿದ್ದಾರೆ.
 
ಗ್ರಾಮಸ್ಥರು ಆತಂಕಪಡುವುದು ಬೇಡ. ಭೂಕಂಪನ ಮಾಪಕ ಇಲಾಖೆ ನಿಗಾವಹಿಸಿದೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಾವಣಗೆರೆಯ ಹಲವೆಡೆ ಭೂಕಂಪನದ ಅನುಭವ