ಆರಕ್ಷಕರ ಮೇಲೆ ಕುಡುಕರ ರಾಕ್ಷಸ ವರ್ತನೆ

Webdunia
ಮಂಗಳವಾರ, 5 ಡಿಸೆಂಬರ್ 2017 (15:26 IST)
ಬೆಂಗಳೂರು: ಮಹಿಳೆಯರ ಜತೆ ಯಾವುದೇ ವ್ಯಕ್ತಿ ಅಸಭ್ಯ ವಾಗಿ ವರ್ತಿಸಿದಾಗ ಪೊಲೀಸರು ಬಂದು ರಕ್ಷಣೆ ನೀಡುತ್ತಾರೆ.  ಆದರೆ ಇಂದು ರಕ್ಷಣೆ ನೀಡುವ ಪೊಲೀಸ್ ಮಹಿಳಾ ಪೇದೆಗಳ ಜತೆ ಇಬ್ಬರು ವ್ಯಕ್ತಿಗಳು ಅಸಭ್ಯವಾಗಿ  ವರ್ತಿಸಿದ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಆರೋಪಿಗಳಾದ ರೋಹಿತ್, ವೈಭವ್ ಇಬ್ಬರು ವ್ಯಕ್ತಿಗಳು ಪಬ್ ನಲ್ಲಿ ಕಂಠಪೂರ್ತಿ ಕುಡಿದು ಹೊರಬಂದು ಕರ್ತವ್ಯದಲ್ಲಿದ್ದ  ಮಹಿಳಾ ಪೇದೆಗಳ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ.


ಹೊಯ್ಸಳ ಗಾಡಿಯ ಒಳಗಿದ್ದ ಮಹಿಳಾ ಪೇದೆಯನ್ನು ಎಳೆದು ಒಬ್ಬ ಅವರ ಮೈಕೈ ಮುಟ್ಟಿ ಕಿರುಕುಳ ನೀಡಿದರೆ, ಇನ್ನೊಬ್ಬ ಹೊಯ್ಸಳದ ಡೋರ್ ತೆಗೆದು ಅಸಭ್ಯವಾಗಿ ವರ್ತಿಸಿದ. ಮಹಿಳಾ ಪೇದೆಗಳ ರಕ್ಷಣೆಗೆ ಬಂದ ಪೇದೆ ಮಂಜಣ್ಣ  ಎಂಬುವವರಿಗೆ ‘ಪೊಲೀಸ್ ಆದ್ರೇನು ನಿಮ್ಮನ್ನು ಬಿಡಲ್ಲ’ ಎಂದು ಆವಾಜ್ ಹಾಕಿದ್ದಾರೆ.


ವೈಯಾಲಿಕಾವಲ್ ಠಾಣೆಯಲ್ಲಿ ಪೇದೆ ಮಂಜಣ್ಣ ಅವರು ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಸರ್ದಾರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಮುಂದಿನ ಸುದ್ದಿ
Show comments