ಕುಡಿದ ನಶೆಯಲ್ಲಿ ಜೊತೆಯಲ್ಲಿದ್ದ ಸ್ನೇಹಿತನ ಹತ್ಯೆ

Webdunia
ಬುಧವಾರ, 9 ಆಗಸ್ಟ್ 2023 (18:01 IST)
ಆತ ರಾತ್ರಿ ಪೂರ್ತಿ ಜೊತೆಯಲ್ಲಿ ಪಾರ್ಟಿ ಮಾಡಿದ್ದಾನೆ, ಅದೇನಾಯ್ತೋ ಅವನಿಗೆ ಕುಡಿದ ನಶೆಯಲ್ಲಿ ಜೊತೆಯಲ್ಲಿ ದ್ದ ಸ್ನೇಹಿತನನ್ನೆ ಹತ್ಯೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಚೇತನ್ ಎಂಬ 21 ವರ್ಷದ ಯುವಕನನ್ನ ಭೀಕರವಾಗಿ ಕೊಲೆಗೈದಿರೋ ಅಮಾನುಲ್ಲ ಎಂಬಾತ ಕೊನೆಗೆ ತಾನೇ ಬಂದು ಪೊಲೀಸರಿಗೆ ಸೆರೆಂಡರ್ ಆಗಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಗಟ್ಟ ಭಾಗದಲ್ಲಿ ಈ ಭೀಕರ ಕೊಲೆ ನಡೆದಿದೆ. ಕೊಲೆಯಾದ ಚೇತನ್ & ಆರೋಪಿ ಅಮಾನುಲ್ಲ  ಮೊದಲಿಂದಲೂ ಪರಿಚತರೇ. ಆದರೆ ಇಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳ ಆಗ್ತಿತ್ತಂತೆ. ನಿನ್ನೆ ರಾತ್ರಿ ಈ ಇಬ್ಬರು ಕೊಮ್ಮಗಟ್ಟ ಗ್ರೌಂಡ್ ಬಳಿ ಮುಖಾಮುಖಿಯಾಗಿದ್ರು. ಈ ವೇಳೆ ಮತ್ತೆ ಇಬ್ಬರ ಮಧ್ಯೆ ಜಗಳ ಆಗಿದ್ದು, ಈ ವೇಳೇ ಅಮಾನುಲ್ಲ ಅಲ್ಲೇ ಇದ್ದ ಕಲ್ಲು ಎತ್ತಿಹಾಕಿ ಚೇತನ್ನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಸಣ್ಣಪುಟ್ಟ ವೈಮನಸ್ಸಿಗೆ ಎದುರಾಳೀಯ ಪ್ರಾಣವನ್ನೇ ತೆಗೆದ ಅಮಾನುಲ್ಲ, ಇಂದು ಬೆಳಿಗ್ಗೆ ತಾನೇ ಕೆಂಗೇರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯ ಕೃತ್ಯದ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕ್ತಿದ್ದು, ಹತ್ಯೆಗೆ ಅಸಲಿ ಕಾರಣ ಏನೆಂದು ಹೊರಬರಬೇಕಿದೆ. ಅದೇ ಏನೆ ಹೇಳಿ ಜೊತೆಯಲ್ಲಿ ಇರೋ ಸ್ನೇಹಿತರೇ ಹೀಗೆ ಮಾಡಿದ್ರೆ ಯಾರನ್ನಾ ನಂಬಬೇಕೋ ಭಗವಂತನೇ ಬಲ್ಲ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ, ಮಕ್ಕಳ ಮೇಲೆ ಪರಿಣಾಮವೇನು ಗೊತ್ತಾ

ದುಬೈ ಏರ್ ಶೋ ದುರಂತ, ತಾಯ್ನಾಡಿಗೆ ಪೈಲೆಟ್ ನಮನ್ಶ್‌ ಸಿಯಾಲ್ ಪಾರ್ಥಿವ ಶರೀರ

ಕರೂರು ಕಾಲ್ತುಳಿತ ಬೆನ್ನಲ್ಲೇ ಪಕ್ಷದ ಮುಖಂಡರ ಸಭೆ ಕರೆದ ನಟ ವಿಜಯ್

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಮುಂದಿನ ಸುದ್ದಿ
Show comments