Webdunia - Bharat's app for daily news and videos

Install App

ಉರಿಯುತ್ತಿದ್ದ ಟ್ರಾಕ್ಟರ್ ನ್ನು ಕೆರೆ ನೀರಿನವರೆಗೆ ಡ್ರೈವಿಂಗ್ ಮಾಡಿದರು…!

Webdunia
ಬುಧವಾರ, 14 ನವೆಂಬರ್ 2018 (14:08 IST)
ಬೆಂಕಿ ಜ್ವಾಲೆಯಿಂದ ಧಗಧಗನೆ ಹೊತ್ತಿ ಉರಿದು ಗ್ರಾಮದ ನಡುರಸ್ತೆಯಲ್ಲೇ ಸಂಚರಿಸಿದ  ಟ್ರ್ಯಾಕ್ಟರ್ ಕೆಲಹೊತ್ತು ಭಯದ ವಾತಾವರಣ ನಿರ್ಮಾಣ ಮಾಡಿದ ಘಟನೆ ನಡೆದಿದೆ.

ಬೆಂಕಿಯಿಂದ ಉರಿಯುತ್ತಿದ್ದ ಟ್ರ್ಯಾಕ್ಟರ್ ನ್ನೇ ಕೆರೆಯವರೆಗೆ ಡ್ರೈವಿಂಗ್ ಮಾಡಿ, ಕೆರೆಗೆ ಇಳಿಸಿ ಚಾಲಕ ಯಂಕಪ್ಪ ಅನಾಹುತ ತಪ್ಪಿಸಿದ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮ್ಮನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇವು ಕೊಂಡೊಯ್ಯುತ್ತಿದ್ದ ವೇಳೆ ಶಾಟ೯ ಸಕಿ೯ಟ್ ನಿಂದ ಹೊತ್ತಿಕೊಂಡಿತು ಬೆಂಕಿ  ಜ್ವಾಲೆ. ಉರಿಯುತ್ತಿದ್ದ ಟ್ರಾಕ್ಟರ್ ನ್ನು ಗ್ರಾಮದ ನಡುರಸ್ತೆಯಲ್ಲೇ ಸಂಚರಿಸುತ್ತಾ  ಕೆರೆಗೆ ಟ್ರ್ಯಾಕ್ಟರ್ ಕೊಂಡೊಯ್ದರು ಚಾಲಕ ಯಂಕಪ್ಪ. ರೈತ ಸಂಜೀವ ಜಲಗೇರಿ ಎಂಬುವವರಿಗೆ ಸೇರಿದ ಮೇವು ಭಸ್ಮವಾಗಿದೆ.

ಕೆರೆಯ ಮದ್ಯದವರೆಗೂ ಟ್ರ್ಯಾಕ್ಟರ್ ಇಳಿಸಿ ನೀರು ಹಾಕಿ ಬೆಂಕಿಯನ್ನು ಗ್ರಾಮಸ್ಥರು ನಂದಿಸಿದರು. ಸುಡುತ್ತಿದ್ದ ಮೇವಿನ ಬಣವಿಗೆ ನೀರು ಹಾಕಿ ಹೆಚ್ಚಿನ ಅನಾಹುತ ತಪ್ಪಿಸಲಾಯಿತು. ಘಟನೆಯಲ್ಲಿ 30 ಸಾವಿರ ಮೌಲ್ಯದ ಮೇವು ಸೇರಿದಂತೆ ಟ್ರ್ಯಾಕ್ಟರ್ ಇಂಜಿನ್ ಗೂ ಹಾನಿಯಾಗಿದೆ.  


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments