Select Your Language

Notifications

webdunia
webdunia
webdunia
webdunia

ಶಿಕ್ಷಕನಿಂದ ವರದಕ್ಷಿಣೆ ಕಿರುಕುಳ: ಪತ್ನಿಯಿಂದ ಪ್ರತಿಭಟನೆ

ಶಿಕ್ಷಕ
ಮಂಡ್ಯ , ಶುಕ್ರವಾರ, 3 ಜೂನ್ 2016 (08:59 IST)
ವೃತ್ತಿಯಲ್ಲಿ ಶಿಕ್ಷಕನಾಗಿರುವ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೋರ್ವರು ಕೆ.ಆರ್.ಪೇಟೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
 
ಪೀಡಿತ ಮಹಿಳೆ ಟಿ.ಆರ್. ವಾಣಿಶ್ರೀ (24) ಕಳೆದ ನಾಲ್ಕು ವರ್ಷಗಳ ಹಿಂದೆ ಮಂಡ್ಯದ ಹಳೆಯೂರು ಗ್ರಾಮದ ಶಿಕ್ಷಕ ಹೆಚ್.ಆರ್. ಮಂಜುನಾಥ್ ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಗಂಡು ಮಗುವಿದೆ. 
 
ಮದುವೆ ಸಮಯದಲ್ಲಿ ಸಹ ಸಾಕಷ್ಟು ವರದಕ್ಷಿಣೆ ತೆಗೆದುಕೊಂಡಿದ್ದ ಪತಿ ಈಗ ಮತ್ತೆ ವರದಕ್ಷಿಣೆಗಾಗಿ ಹಿಂಸೆ ನೀಡುತ್ತಿದ್ದಾನೆ 
ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನನಗೆ ರಕ್ಷಣೆ ಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಾಣಿಶ್ರೀ ಎಚ್ಚರಿಸಿದ್ದಾರೆ. 
 
ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನ್ಯಾಯದ ಭರವಸೆ ನೀಡುವವರೆಗೂ ತಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ನೊಂದ ಮಹಿಳೆ ಹಠ ಹಿಡಿದಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮತ ಹಾಕಲು ಐದು ಕೋಟಿ ಡಿಮ್ಯಾಂಡ್ ಇಟ್ಟ ನಾಲ್ವರು ಶಾಸಕರು