ಪತ್ನಿಯ ನಡತೆ ಸರಿ ಇಲ್ಲವೆಂದು ಕೊಲೆ

Webdunia
ಮಂಗಳವಾರ, 12 ಜುಲೈ 2022 (14:26 IST)
ಪತ್ನಿಯ ನಡತೆ ಸರಿ ಇಲ್ಲವೆಂದು ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆಸಿಕೊಂಡು ಕೊಲೆ ಮಾಡಿ ಸುಟ್ಟು ಹಾಕಿದ ಪ್ರಕರಣವನ್ನು ಭೇದಿಸಿರುವ ಕೆಂಗೇರಿ ಠಾಣೆ ಪೊಲೀಸರು ಆರೋಪಿ ಪತಿ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
 
ಮೂಲತಃ ಯಾದಗಿರಿ ಜಿಲ್ಲೆಯ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ ಅಲಿಯಾಸ ಮೊಹಮ್ಮದ್ ರಫೀಕ್(29) ಜೆಸಿಬಿ ಚಾಲಕ.
ದೊಡ್ಡಬಳ್ಳಾಪುರ ತಾ. ಕರೀಂ ಸೊಣ್ಣೇನಹಳ್ಳಿ ಗ್ರಾಮದ ಸ್ನೇಹಿತ ಪ್ರಜ್ವಲ್(21) ಬಂಧಿತರು.
 
ಕೆಂಗೇರಿ ಉಪನಗರದ ಸನ್‍ಸಿಟಿಯಲ್ಲಿ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ- ನಗೀನಾ ಖಾನಂ ದಂಪತಿ ವಾಸವಾಗಿರುತ್ತಾರೆ ನಡತೆ ಸರಿಯಿಲ್ಲವೆಂದು ಆಗಾಗ್ಗೆ ಪತ್ನಿಯೊಂದಿಗೆ ಮೊಹಮ್ಮದ್ ಜಗಳವಾಡುತ್ತಿದ್ದನು. ಜು. 2ರಂದು ರಾತ್ರಿ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ತನಗೆ ಸಹಾಯ ಮಾಡುವಂತೆ ಪ್ರಜ್ವಲ್‍ನ್ನು ಕೇಳಿದ್ದಾನೆ.
 
ಅಂದು ರಾತ್ರಿ ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆ, ನೈಸ್ ಬಿಡ್ಜ್ ಸಮೀಪದ ಧನ ನಾಯಕನ ಹಳ್ಳಿ ಕಡೆಗೆ ಹೋಗುವ ನಿರ್ಜನ ಪ್ರದೇಶದ ಬಳಿ ಪತ್ನಿಯನ್ನು ಕರೆಸಿಕೊಂಡಿದ್ದಾನೆ. ಏನೋ ಮಾತನಾಡಲು ಕರೆದಿರಬಹುದೆಂದು ನಗೀನಾ ಖಾನಂ ಹೋಗುತ್ತಿದ್ದಂತೆ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ.
ನಂತರ ಆರೋಪಿ ಮೊಹಮದ್ ತನ್ನ ಚಹರೆ ಯಾರಿಗೂ ಗೊತ್ತಾಗಬಾರದೆಂದು ತಲೆ ಬೋಳಿಸಿಕೊಂಡು ಬಿಜಾಪುರಕ್ಕೆ ಪರಾರಿಯಾಗಿದ್ದ.
 
ಮಾರನೇ ದಿನ ಜು.3ರಂದು ಬೆಳಗ್ಗೆ 11.15ರ ಸುಮಾರಿನಲ್ಲಿ ಧನನಾಯಕನ ಹಳ್ಳಿ ಕಡೆಗೆ ಹೋಗುವ ರಸ್ತೆ ಪಕ್ಕದ ನಿರ್ಜನ ಪ್ರದೇಶದ ಹೊಂಗೆ ಮರದ ಕೆಳಗೆ ಪೆÇದೆಯಲ್ಲಿ ಮಹಿಳೆ ಶವವನ್ನು ಗಮನಿಸಿ ಮೋಹನ್ ಕುಮಾರ್ ಎಂಬುವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಸರ್ಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ: ರಾಹುಲ್ ಗಾಂಧಿ ಕಿಡಿ

ಅವನ ಮೇಲೆ ಹಲ್ಲೆ ನಡೆದಾಗ ನನಗೆ ಭಯವಾಗುತ್ತಿತ್ತು: ಅಭಿಜೀತ್ ದಿಪ್ಕೆ ತಾಯಿ ಮೊದಲ ಪ್ರತಿಕ್ರಿಯೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ರೂ ಸಂಜೆ ಮೇಣದಬತ್ತಿ ಮೆರವಣಿಗೆಗೆ ಕರೆ

ಇದು ಸತ್ಯದ ಗೆಲುವು, ಮೋದಿಯವರ ಹಠಮಾರಿತನದ ಸೋಲು

ಉಮರ್ ಖಾಲೀದ್ ಚಿತ್ರ ಹಿಡಿದರೆ ತಪ್ಪೇನಿದೆ: ಬಿಕೆ ಹರಿಪ್ರಸಾದ್ ಪ್ರಶ್ನೆ

ಮುಂದಿನ ಸುದ್ದಿ
Show comments