Select Your Language

Notifications

webdunia
webdunia
webdunia
webdunia

ಬೆಂಗಳೂರನ್ನೇ ಬೆಚ್ಚಿ ಬೀಳಿಸಿತು ಪಾಪಿ ಅಳಿಯನ ಬೀಭತ್ಸ ಕೃತ್ಯ

ಬೆಂಗಳೂರನ್ನೇ ಬೆಚ್ಚಿ ಬೀಳಿಸಿತು ಪಾಪಿ ಅಳಿಯನ ಬೀಭತ್ಸ ಕೃತ್ಯ
ಬೆಂಗಳೂರು , ಶನಿವಾರ, 4 ಮಾರ್ಚ್ 2017 (08:21 IST)
ಕ್ಷುಲ್ಲಕ ಕಾರಣಕ್ಕಾಗಿ ಪಾಪಿ ಅಳಿಯನೋರ್ವ ಅತ್ತೆ-ಮಾವ, ಪತ್ನಿ ಸೇರಿದಂತೆ ನಾಲ್ವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಕೋಣನಕುಂಟೆಯ ಅನ್ನಪೂರ್ಣೇಶ್ವರಿ ನಗರದಲ್ಲಿ ಈ ದಾರುಣ ಘಟನೆ ನಡೆದಿದೆ.
ಮುರುಗಮ್ಮ, ಕುಮಾರ್ ಕೊಲೆಯಾದ ದಂಪತಿ. ಅವರ ಮಗಳಾದ ಸತ್ಯಾ ಪತಿ ಸೆಂಥಿಲ್ ಕುಮಾರ್ ನಿನ್ನೆ ಈ ಹೇಯ ಕೃತ್ಯವನ್ನೆಸಗಿದ್ದಾನೆ. ಚಾಕುವಿನಿಂದ ಮನಬಂದಂತೆ ಅತ್ತೆ ಮಾವ ಮತ್ತು ಪತ್ನಿಯ ಮೇಲಾತ ದಾಳಿ ನಡೆಸಿದ್ದಾನೆ. ಸಹಾಯಕ್ಕಾಗಿ ಬಂದಿದ್ದ ಪಕ್ಕದ ಮನೆಯವರ ಮಂಜುನಾಥ್ ಮೇಲೂ ದಾಳಿ ನಡಸಿದ್ದಾನೆ. ಪರಿಣಾಮ ಅತ್ತೆ- ಸ್ಥಳದಲ್ಲೇ ಸಾವನ್ನಪ್ಪಿದರೆ ಮಾವ ಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಆತನ ಪತ್ನಿ ಮತ್ತು ಮಂಜುನಾಥ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
 
ಆರೋಪಿಯ ಪುಟ್ಟ ಮಗುವನ್ನು ನೆರೆಮನೆಯವರು ಎತ್ತಿಕೊಂಡು ಹೋಗಿ ರಕ್ಷಿಸಿದ್ದಾರೆ.
 
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 
ಕೃತ್ಯ ನಡೆಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಐದು ಜಿಲ್ಲೆಗಳು ಬಯಲು ಮಲ ವಿಸರ್ಜನೆ