Select Your Language

Notifications

webdunia
webdunia
webdunia
webdunia

ಕೇರಳದ ಕೊಲೆಗಡುಕ ಸಂಸ್ಕ್ರತಿ ರಾಜ್ಯಕ್ಕೆ ತರಬೇಡಿ: ಸುರೇಶ್ ಕುಮಾರ್

ಕೇರಳದ ಕೊಲೆಗಡುಕ ಸಂಸ್ಕ್ರತಿ ರಾಜ್ಯಕ್ಕೆ ತರಬೇಡಿ: ಸುರೇಶ್ ಕುಮಾರ್
ಬೆಂಗಳೂರು , ಗುರುವಾರ, 29 ಜೂನ್ 2017 (17:57 IST)
ಕೇರಳ ಕಲ್ಚರ್‌ನ್ನು ರಾಜ್ಯ ರಾಜಕೀಯಕ್ಕೆ ತರಬೇಡಿ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್‌ಗೆ ಸಲಹೆ ನೀಡಿದ್ದಾರೆ. 
 
ಇಂದು ವಿಧಾನಸೌಧದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಕೇರಳ ಕಲ್ಚರ್ ತರುವ ಪ್ರಯತ್ನ ಮಾಡುತ್ತಿದ್ದಾರೆ. ಅದು ತುಂಬಾ ವ್ಯರ್ಥ ಪ್ರಯತ್ನ ಎಂದರು. 
 
ರಾಜ್ಯ ಉಸ್ತುವಾರಿ ವೇಣುಗೋಪಾಲ್, ಎಬಿವಿಪಿ ಮತ್ತು ಆರೆಸ್ಸೆಸ್‌ನೊಂದಿಗೆ ಸಂಪರ್ಕವಿರುವ ಶಾಲಾ ಕಾಲೇಜುಗಳ ಶಿಕ್ಷಕರು, ಪ್ರಾಧ್ಯಾಪಕರು, ಪ್ರಾಂಶುಪಾಲರ ಪಟ್ಟಿಯನ್ನು ಕೆಪಿಸಿಸಿಗೆ ನೀಡುವಂತೆ ಕಾಂಗ್ರೆಸ್ ಮುಖಂಡರನ್ನು ಕೋರಿರುವುದು ಆಘಾತ ತಂದಿದೆ ಎಂದು ಹೇಳಿದ್ದಾರೆ. 
 
ವೇಣುಗೋಪಾಲ್ ಬಗ್ಗೆ ನನಗೆ ತುಂಬಾ ಗೌರವವಿತ್ತು. ಆದರೆ, ಅವರು ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದಾರೆ ಎಂದು ಶಾಸಕ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

200 ರೂ ಮುಖಬೆಲೆಯ ನೋಟು ಶೀಘ್ರ ಚಲಾವಣೆಗೆ