Webdunia - Bharat's app for daily news and videos

Install App

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಬೆನ್ನಲ್ಲೇ ಕುಮಾರಸ್ವಾಮಿ ಗಣಿ ಹಗರಣ ಪ್ರಶ್ನಿಸಿದ ಕಾಂಗ್ರೆಸ್

Sampriya
ಶನಿವಾರ, 17 ಆಗಸ್ಟ್ 2024 (14:44 IST)
ಬೆಂಗಳೂರು: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ಹೊರಹಾಕುತ್ತಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಮನವಿ ಸಲ್ಲಿಸಿದ ಕಡತವನ್ನು ತೆರೆದು ನೋಡಿಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ಕೇಂದ್ರ ಸಚಿವ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಮನವಿ ಸಲ್ಲಿಸಿದ ಕಡತವನ್ನು ತೆರೆದು ನೋಡಿಲ್ಲವೇ?

ಅವರ ವಿರುದ್ಧ ದೂರು ದಾಖಸಿದ್ದು ಯಾರೋ ಖಾಸಗಿ ವ್ಯಕ್ತಿಯಲ್ಲ, ಸ್ವಾಯುತ್ತ ಸಂಸ್ಥೆಯಾದ ಲೋಕಾಯುಕ್ತ ಎನ್ನುವುದು ನಿಮ್ಮ ಗಮನಕ್ಕಿದೆಯೇ?

ಕಳೆದ 10 ತಿಂಗಳಿಂದ ಈ ಕಡತವನ್ನು ತೆಗೆದು ನೋಡುವ ವ್ಯವದಾನ ನಿಮಗೆ ಇರಲಿಲ್ಲವೇ? ಅಥವಾ ತೆರೆದು ನೋಡಲು ಮೋ-ಶಾ ಅನುಮತಿ ಸಿಗಲಿಲ್ಲವೇ?

550 ಎಕರೆಯ ರಾಜ್ಯದ ಅದಿರು ಸಂಪತ್ತಿಗಿಂತ ಕೆಲವೇ ಕೆಲವು ಚದರ ಅಡಿಯ ನಿವೇಶನಗಳ ವಿಚಾರ ನಿಮಗೆ ಮುಖ್ಯವಾಗಿ ಕಂಡಿದ್ದು ಹೇಗೆ?

ಹಲವು ಬಿಜೆಪಿ ನಾಯಕರ ವಿರುದ್ಧದ ಕಡತಗಳು ನಿಮ್ಮ ಟೇಬಲ್ ಮೇಲೆ ಹಲವು ದಿನಗಳಿಂದ ಕೊಳೆಯುತ್ತಿದ್ದರೂ ಅವುಗಳ ಬಗ್ಗೆ ತಾವು ಗಮನ ಹರಿಸದಿರುವುದು ಏಕೆ?

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments