Webdunia - Bharat's app for daily news and videos

Install App

ಸರ್ಕಾರ ಗಂಡ- ಹೆಂಡತಿ ಬಿಟ್ಟವರು ಲವ್ ಮಾಡಿದಂತಿದೆ ಎಂದೋರಾರು?

Webdunia
ಮಂಗಳವಾರ, 4 ಜೂನ್ 2019 (18:38 IST)
ರಾಜ್ಯದ ದೋಸ್ತಿ ಸರ್ಕಾರದ ವಿರುದ್ಧ ಗಂಭೀರ ವ್ಯಂಗ್ಯವಾಡಲಾಗಿದೆ.

ಮಾಜಿ ಶಾಸಕ ಲಕ್ಷ್ಮಣ ಸವದಿ ಮೈತ್ರಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಸರ್ಕಾರ ಗಂಡ ಬಿಟ್ಟ ಹೆಂಡತಿ ಮತ್ತು ಹೆಂಡತಿ ಸತ್ತ ಗಂಡ ಲವ್ ಮ್ಯಾರೇಜ್ ಆದಂತಿದೆ.

ಸದ್ಯ ಇವರಿಬ್ಬರೂ ಹೊಸದಾಗಿ ಮದುವೆಯಾದಂತಿದೆ ಅಂತ ಸವದಿ ವ್ಯಂಗ್ಯವಾಡಿದ್ದಾರೆ.
ಸದ್ಯ ಒಬ್ಬರಿಗೊಬ್ಬರಿಗೆ ತಾಳ ತಂತಿ ಇಲ್ಲ- ಹೊಂದಾಣಿಕೆ‌ ಇಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಸಹ ಯಾವುದೇ ಯೋಜನೆ ಇಲ್ಲ ಎಂದು ದೂರಿದ್ದಾರೆ.

ರಾಜ್ಯ ಸರ್ಕಾರದವರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಿ ಅಂತ ಹೇಳ್ತಾರೆ, ಆದರೆ ಆ ಯೋಜನೆ ಕೇಂದ್ರ ಸರ್ಕಾರದ್ದು ಹಾಗಾದರೆ ಇವರ ಕೊಡುಗೆ ಏನು? ಎಂದರು.

ಸಿದ್ದರಾಮಯ್ಯನವರಿಗೂ ಹಾಗೂ ದೇವೆಗೌಡರಿಗೂ 20 ವರ್ಷಗಳ ರಾಜಕೀಯ ದ್ವೇಷವಿದೆ. 2004 ರಲ್ಲಿ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ದೇವೆಗೌಡರು ಅದಕ್ಕೆ ಅಡ್ಡಗಾಲು ಹಾಕಿ ಆ ಅವಕಾಶ ತಮ್ಮಿಂದ ಕಸಿದಿದ್ದು ಸಿದ್ದು ಮನಸಿನಲ್ಲಿದೆ ಎಂದರು .


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments