Webdunia - Bharat's app for daily news and videos

Install App

ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು ಹೇಳಿದ್ದೇನು ಗೊತ್ತಾ?

Webdunia
ಭಾನುವಾರ, 14 ಅಕ್ಟೋಬರ್ 2018 (14:59 IST)
ಲೋಕಸಭಾ ಉಪಚುನಾವಣೆ ಬರಲು ಬಿಜೆಪಿ ನಾಯಕ ಶ್ರೀರಾಮುಲು ಕಾರಣ. ಎರಡೂ ಬಾರಿ ವಿಧಾನ ಸಭೆ, ಒಂದು ಬಾರಿ ಲೋಕಸಭೆಗೆ ರಾಜೀನಾಮೆ‌ ನೀಡಿದ್ದಾರೆ. ಹಾಗಾಗಿ ಪದೆ ಪದೇ ಬೈ ಎಲೆಕ್ಷನ್ ಗಣಿನಾಡಿನಲ್ಲಿ ಆಗ್ತಿದೆ ಎಂದು ಅಂಜನೇಯ ಅರೋಪಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು,  ಶ್ರೀರಾಮುಲು ಬಳ್ಳಾರಿ ಜನರಿಗೆ ಮಂತ್ರಿಯಾಗಲು ಬಳಕೆ ಮಾಡಿಕೊಳ್ಳುತ್ತಿದ್ದಿರಿ. ಒಂದು ಬಾರಿ ಅಧಿಕಾರಕ್ಕೆ ಬಂದಿದ್ದಕ್ಕೆ ಅಕ್ರಮ ಸಂಪತ್ತು ಲೂಟಿ ಮಾಡಿದ್ದಿರಿ ಎಂದು ಟೀಕಿಸಿದರು.

ಶ್ರೀರಾಮುಲು ಅರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರಗೆ ಜೈಲಿಗೆ ಕಳಿಸ್ತಿರಾ ನೀವು?  ತಾವು ಕೂಡ ಜೈಲಿಗೆ ಹೋಗ್ತಿರಿ ಅದು ಆಕುಲು ಲಕ್ಷ್ಮಮ್ಮರ 27 ಎಕರೆ ಭೂಮಿ ಕಬಳಿಸಿದ್ದಿರಿ ಎಂದರು.  ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ ಅಕ್ರಮವೆಸಗಿದ್ದಿರಿ, ಆ ಎರಡೂ ಕೇಸ್ ಗಳಲ್ಲಿ ಜೈಲಿಗೆ ಹೋಗ್ತಿರಿ ಎಂದು ಎಚ್ಚರಿಸಿದರು.  

ನಾಗೇಂದ್ರ ವಿರುದ್ಧ ತಾವು ಯಾಕೆ ಸ್ಪರ್ಧೆ ಮಾಡದೇ ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋದ್ರಿ ಎಂದು ವ್ಯಂಗ್ಯವಾಡಿದ ಅವರು, ನಾವು ಚುನಾವಣೆಗೆ ನೀಲ್ತಿವಿ, ನೀವು ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆ ನಿಲ್ರಿ. ನೀವು ಗೆಲ್ತಿರೋ, ನಾವು ಗೆಲ್ತಿವೋ ನೋಡೋಣ ಎಂದು ಸವಾಲ್ ಹಾಕಿದರು.

ಬಳ್ಳಾರಿ ಜನರಿಗೆ ನೀವು ಮೂರು ಬಾರಿ ಮೋಸ ಮಾಡಿದ್ದಿರಿ. ಬಳ್ಳಾರಿಗೇನು ಕೊಡುಗೆ ಕೊಟ್ಟಿದ್ದೀರಿ?  ಆರೋಗ್ಯ ಮಂತ್ರಿ ಇದ್ದಾಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲಾ ಅಂದಾಗ ಜನರಿಗೆ ಏನು ಉತ್ತರ ಕೊಟ್ಟಿದ್ದಿರಿ?  ವಿಧಾನ ಸೌಧದಲ್ಲಿ ಏನು ಉತ್ತರ ನೀಡಿದ್ದಿರಿ? ಎಂದು ದೂರಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments