ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದೆಲ್ಲಿ ಗೊತ್ತಾ?

Webdunia
ಸೋಮವಾರ, 24 ಸೆಪ್ಟಂಬರ್ 2018 (17:11 IST)
ವಿಘ್ನ ವಿನಾಯಕ, ಲಂಬೋದರ, ಗಣಪತಿ ಹಬ್ಬದ ಸಂಭ್ರದ ಇನ್ನೂ ಜನರ ಮನದಿಂದ ಮರೆಯಾಗಿಲ್ಲ. ಅಂಥದ್ದರಲ್ಲಿ ಶಾಸ್ತ್ರ ಪ್ರಕಾರ ನೀರಿನಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ಆದರೆ ಅವರು ಮಾಡಿದ್ದೇ ಬೇರೆ…

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆಯನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಮುದ್ನಾಳ್ ಕ್ರಾಸ್ ಹತ್ತಿರದ ಕಾಲುವೆಯಲ್ಲಿ ಮೂರ್ತಿಗಳನ್ನು ಬಿಸಾಡಿ ಹೋಗಿರುವ ಜನರ ಕ್ರಮಕ್ಕೆ ಗಣೇಶನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲುವೆಯಲ್ಲಿ ನೀರಿಲ್ಲ. ನೀರಿಲ್ಲದ ಕಾಲುವೆಯಲ್ಲಿ ಬೇಕಾಬಿಟ್ಟಿಯಾಗಿ ಪಿ.ಓ.ಪಿ ಮೂರ್ತಿಗಳನ್ನು ಇಟ್ಟು ಹೋಗಲಾಗಿದೆ. ಮುದ್ನಾಳ್ ಕ್ರಾಸ್ ನಿಂದ ಕೇವಲ 10 ಕಿ.ಮೀ ಅಂತರದಲ್ಲಿ ಕೃಷ್ಣಾ ನದಿ ಇದೆ. ಆದರೆ ನದಿ ನೀರಿಗೆ ಹಾಕದೆ ಕಾಲುವೆಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಡಾಂಭಿಕ ಭಕ್ತಿಗಾಗಿ ಗಣಪತಿ ಪ್ರತಿಷ್ಠಾಪನೆ ಮಾಡಿ ಬೇಕಾಬಿಟ್ಟಿಯಾಗಿ ವಿಸರ್ಜನೆ ಮಾಡಲಾಗಿದೆ ಅಂತಾ ಸ್ಥಳೀಯರು ಆರೋಪ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಿನ್ನಸ್ವಾಮಿ ಕಾಲ್ತುಳಿತಕೇಸ್‌ನ ಕ್ಲೀನ್ ಚಿಟ್ ವರದಿ ಸಿಕ್ಕ ಬಳಿ ನಾನೇ ಸುಟ್ಟು ಹಾಕ್ತೀನಿ

ರೇಪಿಸ್ಟ್‌ಗಳನ್ನು ರಕ್ಷಿಸುವವರು ಶಿಕ್ಷಣ ಸಚಿವ: ರಾಹುಲ್ ಗಾಂಧಿ

ರಾಜ್ಯವನ್ನೇ ಬೆಚ್ಚಿಬೀಳಿಸಿದ ಲಾವಣ್ಯ ಹತ್ಯೆ‌ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಮೇಕೆದಾಟು ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ತಮಿಳು ಸಿಎಂ ವಿಜಯ್ ಜೋಸೆಫ್ ಪತ್ರ

ಧರ್ಮೇಂದ್ರ ಪ್ರಧಾನ್‌ಗೆ ಸ್ವಾಗತ ನೀಡಿರುವುದು ನಾಚಿಕೆಗೇಡು: ಪ್ರಿಯಾಂಕಾ ಗಾಂಧಿ ಕಿಡಿ

ಮುಂದಿನ ಸುದ್ದಿ
Show comments