ಪರಿವರ್ತನಾ ಯಾತ್ರೆ ರಥದ ಬಗ್ಗೆ ನಿಮಗೆಷ್ಟು ಗೊತ್ತು…?

Webdunia
ಶುಕ್ರವಾರ, 3 ನವೆಂಬರ್ 2017 (09:42 IST)
ಬೆಂಗಳೂರು:  ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಬಿಎಸ್ ವೈ ಯಾತ್ರೆ ಆರಂಭಿಸಿದ್ದು, ಕುಣಿಗಲ್ ನಲ್ಲಿ ರಥ ಸಂಚಾರ ಮುಗಿಸಿದೆ. ಆದರೆ ಪರಿವರ್ತನಾ ಯಾತ್ರೆ ರಥದ ಬಗ್ಗೆ ನಿಮಗೆಷ್ಟು ಗೊತ್ತು…?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಬಳಸುತ್ತಿರುವ ರಥವನ್ನು ಬರೋಬ್ಬರಿ 90 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಿಎಸ್ ವೈ ಆಸ್ತಿಕರೇ. ಹೀಗಾಗಿ ಅವರು ಸಂಖ್ಯಾಶಾಸ್ತ್ರವನ್ನು ನಂಬುತ್ತಾರೆ. ಅವರು ನಿತ್ಯ ಸಂಚರಿಸೋದು 4545 ಇರುವ ಕಾರಿನಲ್ಲಿ. ಹೀಗಾಗಿ ಈ ರಥಕ್ಕೂ ಕೂಡ ಅದೇ ಸಂಖ್ಯೆಯಲ್ಲಿ ರಿಜಿಸ್ಟರ್ ಮಾಡಲಾಗಿದೆ.

ವಿಶೇಷವಾಗಿ ಇವರಿಗಾಗಿಯೇ ಈ ವಾಹನ ಡಿಸೈನ್ ಮಾಡಲಾಗಿದೆ. ಇದರಲ್ಲಿ 2 ವಿಐಪಿ ಚೇರ್ ಗಳಿವೆ. ವಿಶ್ರಾಂತಿ ತೆಗೆದುಕೊಳ್ಳಲು ಒಂದು ಉದ್ದದ ಸೋಫಾ ಇದೆ. ಇಲ್ಲಿ ಬೇಕಾದಲ್ಲಿ ಸಣ್ಣ ಮೀಟಿಂಗ್ ಸಹ ನಡೆಸಬಹುದಾಗಿದೆ.

ಒಳಗಡೆ ಸಂಪೂರ್ಣ ಎಸಿ ವ್ಯವಸ್ಥೆಯಿದೆ. ಒಳಗೆ ಅಡುಗೆ ಮಾಡಿಕೊಳ್ಳಲು ಇಂಡಕ್ಷನ್ ಸ್ಟೌವ್ ಇದ್ದು, ಮೈಕ್ರೊವೇವ್ ಓವೆನ್ ವ್ಯವಸ್ಥೆಯೂ ಇದೆ. ಪಕ್ಕದಲ್ಲಿ ಸಣ್ಣ ಟಾಯ್ಲೆಟ್ ಕೂಡ ಇದೆ. ಇನ್ನು ಸ್ಯಾಟಲೈಟ್ ಮೂಲಕ ದಿನದ ನ್ಯೂಸ್ ಅಪ್ ಡೇಟ್ ವೀಕ್ಷಿಸಲು ಎಲ್ಇಡಿ ಟಿವಿ ಸಹ ಇದೆ. ಇದು ರಥದ ಒಳಗಿರುವ ವ್ಯವಸ್ಥೆಗಳು.

ಇನ್ನು ಹೊರಗೆ ಬಂದ್ರೆ ಹೋದಕಡೆಯೆಲ್ಲ ಪ್ರತ್ಯೇಕ ವೇದಿಕೆ ನಿರ್ಮಿಸುವ ಬದಲು ರಥದಲ್ಲಿಯೇ ವೇದಿಕೆಯ ವ್ಯವಸ್ಥೆ ಇದೆ. ಇಲ್ಲಿ ಒಟ್ಟಿಗೆ ಸುಮಾರು 20 ಜನ ಏಕಕಾಲದಲ್ಲಿ ನಿಂತುಕೊಳ್ಳಬಹುದಾಗಿದೆ. ಮೈಕ್ ಸೆಟ್ ವ್ಯವಸ್ಥೆ ಕೂಡ ಇದರಲ್ಲಿಯೇ ಇದೆ.

224 ವಿಧಾನಸಭಾ ಕ್ಷೇತ್ರವನ್ನು 75 ದಿನದಲ್ಲಿ ಸಂಚಾರ ಮಾಡುವ ಗುರಿ ಹೊಂದಿದ್ದು, ಜನವರಿ 25ರಂದು ಮೈಸೂರು ಜಿಲ್ಲೆ ಪ್ರವಾಸ ಮುಗಿಯಲಿದೆ. ಜನವರಿ 28ರಂದು ರಥ ಬೆಂಗಳೂರಿಗೆ ಆಗಮಿಸಲಿದ್ದು, ನಂತರ ಬೃಹತ್ ರ್ಯಾಲಿ ನಡೆಯಲಿದೆ. ಈ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ಘಟಾನುಘಟಿ ನಾಯಕರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Big Breaking: ಆಲ್ ಫಲಾಹ್ ಗ್ರೂಪ್‌ನ ಅಧ್ಯಕ್ಷ 13ದಿನ ಇಡಿ ಕಸ್ಟಡಿಗೆ

ಸ್ಫೋಟಕ್ಕೂ ಮುನ್ನಾ ಮನೆಗೆ ಭೇಟಿ ಕೊಟ್ಟ ಬಾಂಬರ್‌ ಉಮರ್ ಮಾಡಿದ್ದೇನು ಗೊತ್ತಾ

Karnataka Weather, ಚಳಿಯ ಜತೆಗೆ ರಾಜ್ಯದ ಈ ಭಾಗದಲ್ಲಿ ಇಂದು, ನಾಳೆ ಮಳೆ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

ಮುಂದಿನ ಸುದ್ದಿ
Show comments