Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಡಿಕೆಶಿ

ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಡಿಕೆಶಿ
bangalore , ಶುಕ್ರವಾರ, 2 ಡಿಸೆಂಬರ್ 2022 (14:46 IST)
ಸೈಲೆಂಟ್ ಸುನೀಲ್ ಸೇರಿದಂತೆ ಇತರ ರೌಡಿ ಶೀಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಪ್ರತಿಕ್ರಿಯಿಸಿದ್ದು,ಮೊದಲು ಅಪರೇಷನ್ ಕಮಲ ಮಾಡಿದ್ರು ಈಗ ರೌಡಿಗಳ ಆಪರೇಷನ್ ಮಾಡ್ತಿದ್ದಾರೆ.ಅವರಿಗೆ ಒಳ್ಳೆಯದಾಗಲಿ, ಶುಭವಾಗಲಿ.ನಮ್ಮ ಪಾರ್ಟೀನೇ ಇಲ್ಲ, ಅವರದೇ ಪಾರ್ಟಿ ಇರೋದು ದೇಶದಲ್ಲಿ ಬಿಜೆಪಿಯದ್ದು  ಡಬಲ್ ಇಂಜಿನ್ ಸರ್ಕಾರ.ಏನೋ ಹೆಣ ಹೊರಲು  ನಾಲ್ಕು ಜನ ಇದ್ದೇವೆ.ಬಿಜೆಪಿಗೆ ಅಭ್ಯರ್ಥಿಗಳು ಇದ್ದಾರೋ ಇಲ್ವೋ ಎಂಬುದನ್ನ ಅವರನ್ನೇ ಕೇಳಿ ಅಂತಾ ಡಿಕೆಶಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.
 
ಇನ್ಮೂ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ಮೂರ್ನಾಲ್ಕು ದಿನಗಳಲ್ಲಿ  ಚುನಾವಣೆ ಸಮಿತಿ ರಚನೆ ಆಗುತ್ತದೆ.ದೆಹಲಿ ಇಂದ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಆಗುತ್ತದೆ ಎಂದು ಹೇಳಿದ್ರು.ಇನ್ನೂ ಮಹಾರಾಷ್ಟ್ರ ಗಡಿ ತಗಾದೆ ವಿಚಾರ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಿರಕಾರಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ವಥ್ ನಾರಯಣರನ್ನ ಅದ್ದೂರಿಯಾಗಿ ಸನ್ಮಾನಿಸಿದ ಜನರು