Webdunia - Bharat's app for daily news and videos

Install App

ಗಣೇಶನಿಗೆ ದೇಣಿಗೆ ಕೇಳಲು ಬಂದ ಮಕ್ಕಳನ್ನು ಅಟ್ಟಿದ ಡಿಕೆ ಶಿವಕುಮಾರ್: ಡಾ ಸಿಎನ್ ಮಂಜುನಾಥ್ ನಡೆದುಕೊಂಡ ರೀತಿ ನೋಡಿ

Sampriya
ಮಂಗಳವಾರ, 3 ಸೆಪ್ಟಂಬರ್ 2024 (16:34 IST)
Photo Courtesy X
ಬೆಂಗಳೂರು: ಇನ್ನೇನು ಗೌರಿ ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಯುವಕರ ಬಳಗ ಹಬ್ಬದ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಇನ್ನೂ ತಮ್ಮ ಏರಿಯಾದಲ್ಲಿ ಅದ್ಧೂರಿಯಾಗಿ ಗಣೇಶನನ್ನು ಕೂರಿಸಬೇಕೆಂದು ಹಣ ಸಂಗ್ರಹಣೆಗೆ ಈಗಾಗಲೇ ಇಳಿದಿದ್ದಾರೆ.

ಇದೀಗ ಅಶ್ಚರ್ಯ ಎಂಬಂತೆ ಗಣೇಶ ಕೂರಿಸಲು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಸಿಎನ್‌ ಮಂಜುನಾಥ್ ಬಳಿಯೇ ಚಿಣ್ಣರ ಗ್ಯಾಂಗ್‌ವೊಂದು ಹೋದ ಪ್ರತ್ಯೇಕ ಘಟನೆ ಈಚೆಗೆ ನಡೆದಿದೆ. ಚಂದಾ ವಸೂಲಿಗೆ ಬಂದ ಮಕ್ಕಳೊಂದಿಗೆ ಡಿಕೆ ಶಿವಕುಮಾರ್ ಅವರು ಆಕ್ರೋಶದಿಂದ ವರ್ತಿಸಿ, ಇಲ್ಲಿಂದಿ ನಡೀರಿ ಎಂದಿದ್ದಾರೆ. ಇನ್ನೂ ಸಿಎನ್‌ ಮಂಜುನಾಥ್ ಅವರು ಹಣ ಕೊಟ್ಟು, ಚೆನ್ನಾಗಿ ಓದಿ ಮುಂದೆ  ಬನ್ನು ಎಂದು ಮಕ್ಕಳಿಗೆ ಬುದ್ಧಿ ಮಾತು ಹೇಳಿದ್ದಾರೆ.

ಮಕ್ಕಳೊಂದಿಗೆ ಡಿಕೆಶಿ ಹಾಗೂ ಸಿಎನ್ ಮಂಜುನಾಥ್ ಅವರ ವರ್ತನೆಯ ವಿಡಿಯೋ ಹಂಚಿದ ನೆಟ್ಟಿಗರು ದುರಂಹಕಾರದ ಪರಮಾವದಿಗೂ ಹಾಗೂ ಹೃದಯವಂತನ ಹೃದಯವಂತಿಕೆಗೆ ಇರುವ ವ್ಯತ್ಯಾಸ ನೋಡಿ ಎಂದು ಡಿಕೆಶಿ ವರ್ತನೆ ಬಗ್ಗೆ  ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸಿಎನ್ ಮಂಜುನಾಥ್ ಅವರ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ.

ಈಚೆಗೆ ಕನಕಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಕ್ಕಳ ಗುಂಪೊಂದು ಡಿಕೆಶಿ ಬಳಿ ಗಣೇಶ ಕೂರಿಸಲು ಹಣ ಕೇಳಿದ್ದಾರೆ. ಮಕ್ಕಳೆಲ್ಲ ಡಿಸಿಎಂ ಸಾಹೇಬರು ದುಡ್ಡು ಕೊಡ್ತಾರೆ ಎಂಬ ಖುಷಿಯಲ್ಲಿ ಸರತಿಯಲ್ಲಿ ನಿಂತು ಹೋದಾರೆ, 'ಆಯ್ತು ಎಂಪಿ ಬರ್ತಾರೆ, ಅವರೇ ದುಡ್‌ ಕೊಡ್ತಾರೆ ನಡೀರಿ ನಡೀರಿ' ಎಂದು ಕಳುಹಿಸಿಬಿಟ್ಟಿದ್ದಾರೆ. ಇದರಿಂದ ಮಕ್ಕಳೆಲ್ಲ ಬೇಸರದಿಂದ ಅಲ್ಲಿಂದ್ದ ಹೊರಟು ಹೋಗಿದ್ದಾರೆ.

ಇನ್ನೊಂದು ವಿಡಿಯೋದಲ್ಲಿ ಸಂಸದ ಡಾ.ಸಿ.ಎನ್‌ ಮಂಜುನಾಥ್ ಅವರು ಪ್ರಯಾಣಿಸುತ್ತಿರುವಾಗ ವಾಹನಕ್ಕೆ ಅಡ್ಡ ನಿಂತ ಮಕ್ಕಳ ಗುಂಪೊಂದು ಗಣೇಶ ಕೂರಿಸಲು ಹಣ ಕೇಳಿದ್ದಾರೆ. ಹಣ ಕೊಟ್ಟ ಮಂಜುನಾಥ್ ಅವರು 'ಚೆನ್ನಾಗಿ ಓದಬೇಕು' ಎಂದು ಕಿವಿಮಾತು ಹೇಳಿ ಅಲ್ಲಿಂದ್ದ ಹೊರಟು ಹೋದರು.

ಇದೆರಡು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ, ದುರಂಹಕಾರಿಗೆ ಮತ್ತು ಹೃದಯವಂತನ ನಡುವಿನ ವ್ಯತ್ಯಾಸ ನೋಡಿ ಎಂದಿದ್ದಾರೆ.




<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಮುಂದಿನ ಸುದ್ದಿ
Show comments