ನಿಮ್ ಬಾಸ್ ಖರ್ಗೆ ಕುಂಭಮೇಳಕ್ಕೆ ಬೈದ್ರು ನೀವು ನೋಡಿದ್ರೆ ಸ್ನಾನ ಮಾಡಿದ್ರಿ: ಡಿಕೆ ಶಿವಕುಮಾರ್ ಟ್ರೋಲ್

Krishnaveni K
ಸೋಮವಾರ, 10 ಫೆಬ್ರವರಿ 2025 (15:06 IST)
Photo Credit: X
ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ನಿಮ್ಮ ಬಾಸ್ ಖರ್ಗೆ ಕುಂಭಮೇಳಕ್ಕೆ ಬೈದ್ರು ನೀವು ನೋಡಿದ್ರೆ ಸ್ನಾನ ಮಾಡುತ್ತಿದ್ದೀರೀ ಎಂದಿದ್ದಾರೆ.

ದೆಹಲಿ ಚುನಾವಣೆ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳಕ್ಕೆ ಹೋದರೆ ಪಾಪ ಕಳೆಯಲ್ಲ, ಗಂಗಾ ನದಿಯಲ್ಲಿ ಮುಳುಗಿ ಎದ್ದರೆ ಬಡತನ ನಿವಾರಣೆಯಾಗಲ್ಲ ಎಂದು ವ್ಯಂಗ್ಯ ಮಾಡಿದ್ದರು. ಹೀಗಾಗಿ ಈಗ ಅದೇ ಪಕ್ಷದವರಾದ ಡಿಕೆ ಶಿವಕುಮಾರ್ ಕುಂಭಮೇಳಕ್ಕೆ ಹೋಗಿದ್ದರೆ ಸಾಕಷ್ಟು ಜನ ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿ ನಾಯಕರೂ ಡಿಕೆಶಿಗೆ ಟಾಂಗ್ ಕೊಟ್ಟಿದ್ದರು. ಇದಕ್ಕೆಲ್ಲಾ ಉತ್ತರಿಸಿದ್ದ ಡಿಕೆಶಿ ನನ್ನ ನಂಬಿಕೆ ನನ್ನದು. ಅಷ್ಟಕ್ಕೂ ಕುಂಭಮೇಳ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ ಎಂದಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕುಂಭಮೇಳದ ವಿಡಿಯೋ ಹಂಚಿಕೊಂಡಿರುವುದಕ್ಕೆ ಅವರು ಟ್ರೋಲ್ ಆಗಿದ್ದಾರೆ.

ನಿಮ್ಮ ಬಾಸ್ ಖರ್ಗೆ ನೋಡಿದ್ರೆ ಕುಂಭಮೇಳಕ್ಕೆ ಬೈತಾರೆ. ಈಗ ನೀವು ಮುಳುಗು ಹಾಕಿರುವ ವಿಡಿಯೋವನ್ನು ನಿಮ್ಮ ಬಾಸ್ ಗೆ ಕಳುಹಿಸಿಕೊಡಿ ಎಂದು ಕೆಲವರು ಕಾಲೆಳೆದರೆ ಮತ್ತೆ ಕೆಲವರು ಬಹುಶಃ ನಿಮ್ಮಂತೆ ವಿರೋಧ ಪಕ್ಷದವರೂ ನಿಮ್ಮ ನಾಯಕರಿಗೆ ಟಾಂಗ್ ಕೊಡಲ್ಲ ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟದ ಆರೋಪಿಗಳೊಂದಿಗೆ ಯಾವುದೇ ಸಂಪರ್ಕವಿಲ್ಲ: ಅಲ್ ಫಲಾಹ್ ಸ್ಪಷ್ಟನೆ

ಭಯೋತ್ಪಾದಕರನ್ನು ತಯಾರಿಸುವ ಸಾಫ್ಟ್ವೇರ್ ಯಾವುದು: ಸಿಟಿ ರವಿ

ರಾಹುಲ್ ಗಾಂಧಿ ಕಾಲು ಇಟ್ಟ ಕಡೆ ಕಾಂಗ್ರೆಸ್‌ಗೆ ಸೋಲು: ಅಶೋಕ್‌ ಲೇವಡಿ

ಪಿತೂರಿ ಹಿಂದಿರುವವರನ್ನು ಮಟ್ಟಹಾಕುದ್ದೇವೆ: ದೆಹಲಿ ಸ್ಫೋಟದ ಕುರಿತು ಮೋದಿ ವಾರ್ನಿಂಗ್‌

ಬಿಹಾರ ಚುನಾವಣೆಯಲ್ಲಿ ಗೆಲ್ಲಕ್ಕೇ ಬಿಜೆಪಿ ದೆಹಲಿ ಸ್ಪೋಟ ಮಾಡಿರಬಹುದು: ಬಸವರಾಜ ರಾಯರೆಡ್ಡಿ

ಮುಂದಿನ ಸುದ್ದಿ
Show comments