ಮತ್ತೆ ಶುರು ಸಿಎಂ ಬದಲಾವಣೆ ಚರ್ಚೆ: ಡಿಕೆ ಶಿವಕುಮಾರ್ ಬೆಂಬಲಿಗರ ಮಹತ್ವದ ನಡೆ

Krishnaveni K
ಶುಕ್ರವಾರ, 27 ಫೆಬ್ರವರಿ 2026 (10:11 IST)
Photo Credit: X
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಮತ್ತೆ ಶುರುವಾಗಿದೆ. ಡಿಕೆ ಶಿವಕುಮಾರ್ ಬೆಂಬಲಿಗರು ಮಹತ್ವದ ಹೆಜ್ಜೆಯಿಟ್ಟಿದ್ದು ಒತ್ತಡ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಇದುವರೆಗೆ ಹೈಕಮಾಂಡ್ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಸಿದ್ದರಾಮಯ್ಯನವರನ್ನು ಕೆಳಗಿಳಿಸುವುದು ಅಷ್ಟು ಸುಲಭದ ಮಾತಲ್ಲ.ಹೀಗಾಗಿ ಡಿಕೆಶಿ ಬಣದಲ್ಲಿ ಅಸಮಾಧಾನ ಕಂಡುಬರುತ್ತಿದೆ.

ನಿನ್ನೆ ರಾತ್ರಿ ಮೇಖ್ರಿ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಸುಮಾರು 40 ಶಾಸಕರು ಈ ಡಿನ್ನರ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಡಿಕೆಶಿ ಬಣದ ಬಲ ಪ್ರದರ್ಶನ ಮಾಡಿದ್ದಾರೆ.

ಸಿಪಿ ಯೋಗೇಶ್ವರ್, ಎಚ್ ಸಿ ಬಾಲಕೃಷ್ಣ, ನಯನಾ ಮೋಟಪ್ಪ, ಎನ್ ಎ ಹ್ಯಾರಿಸ್, ಡಿ ಸುಧಾಕರ್, ಟಿಬಿ ಜಯಚಂದ್ರ, ರವಿ ಗಣಿಗ, ಪ್ರಕಾಶ್ ಕೋಳಿವಾಡ ಮುಂತಾದವರು ಭಾಗಿಯಾಗಿದ್ದಾರೆ. ಇನ್ನು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶಾಸಕ ಸಿಪಿ ಯೋಗೇಶ್ವರ್, ಎಚ್ ಸಿ ಬಾಲಕೃಷ್ಣ ಬರ್ತ ಡೇ ನಿಮಿತ್ತ ಒಟ್ಟಿಗೆ ಸೇರಿ ಊಟ ಮಾಡಿದ್ದೆವು ಎಂದಿದ್ದಾರೆ. ಹಾಗಿದ್ದರೂ ಈ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ರಾಜ್ಯದಲ್ಲಿ ಇಂದು ಮಳೆ ಸೂಚನೆಯಿದೆಯೇ, ಇಲ್ಲಿದೆ ವರದಿ

Video, ವಿಧಾನಸಭೆಯೊಳಗೆ ರಾಜಸ್ಥಾನದ ಬಿಜೆಪಿ ನಾಯಕನ ಇದೆಂಥಾ ನಡವಳಿಕೆ

ಕುರ್ಚಿ ಗುದ್ದಾಟದ ನಡುವೆ ಕುತೂಹಲ ಮೂಡಿಸಿದ ಪರಮೇಶ್ವರ್ ಹೇಳಿಕೆ

Video: ನಾನೂ, ನನ್ನ ಸಹೋದರಿ ಜಗಳ ಮಾಡಿದ್ವಿ: ಪ್ರಿಯಾಂಕಾಗೆ ಹೀಗೆ ಮ್ಯಾಜಿಕ್ ಮಾಡಿದ್ರಂತೆ ರಾಹುಲ್ ಗಾಂಧಿ

ಅಮ್ಮನಿಂದ ತಳ್ಳಲ್ಪಟ್ಟ ಕೋತಿ ಮರಿಗೆ ಅಮ್ಮನಾಗಿದ್ದ ಗೊಂಬೆಗೆ ಡಿಮ್ಯಾಂಡಪ್ಪೋ, ಡಿಮ್ಯಾಂಡ್‌

ಮುಂದಿನ ಸುದ್ದಿ
Show comments