Webdunia - Bharat's app for daily news and videos

Install App

ಧರ್ಮಸ್ಥಳ ಕೇಸ್ ನಲ್ಲಿ ಷಡ್ಯಂತ್ರವಿದೆ ಎಂದು ನನಗೆ ಮೊದಲೇ ಗೊತ್ತಿತ್ತು: ಡಿಕೆಶಿ ಶಾಕಿಂಗ್ ಹೇಳಿಕೆ

Krishnaveni K
ಶನಿವಾರ, 23 ಆಗಸ್ಟ್ 2025 (11:50 IST)
ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಬಂಧನವಾಗುತ್ತಿದ್ದಂತೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಷಡ್ಯಂತ್ರ ನನಗೆ ಮೊದಲೇ ಗೊತ್ತಿತ್ತು ಎಂದಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಗುಂಡಿಗಳನ್ನು ಅಗೆಸಿದ್ದ ಮಾಸ್ಕ್ ಮ್ಯಾನ್ ಮೇಲೆಯೇ ಅನುಮಾನ ಶುರುವಾಗಿತ್ತು. ಇದರ ಬೆನ್ನಲ್ಲೇ ಎಸ್ಐಟಿ ಆತನನ್ನು ವಿಚಾರಣೆಗೊಳಪಡಿಸಿತ್ತು. ಈ ವೇಳೆ ಆತ ನನ್ನನ್ನು ಈ ರೀತಿ ಹೇಳು ಎಂದು ಒಂದು ಗುಂಪು ಹೇಳಿತ್ತು ಎಂದು ಸತ್ಯ ಬಾಯ್ಬಿಟ್ಟಿದ್ದ.

ಈ ಹಿನ್ನಲೆಯಲ್ಲಿ ಸತತ ಒಂದು ದಿನ ಆತನ ವಿಚಾರಣೆ ನಡಸಿದ ಎಸ್ಐಟಿ ಈಗ ಸುಳ್ಳು ಹೇಳಿಕೆ ನೀಡಿದ್ದಕ್ಕೆ ಆತನನ್ನೇ ಬಂಧಿಸಿದೆ. ಈ ಬಗ್ಗೆ ಇಂದು ಮಾಧ್ಯಮಗಳು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿವೆ.

ಇದಕ್ಕೆ ಉತ್ತರಿಸಿರುವ ಅವರು ‘ನೋಡ್ರಿ.. ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರವಿದೆ ಎಂದು ನನಗೆ ಮೊದಲೇ ಗೊತ್ತಿತ್ತು. ಹೀಗಾಗಿ ನಾನೇ ಅದನ್ನು ಮೊದಲು ಹೇಳಿದ್ದೆ. ನಾನು ಹೇಳಿದ ಮೇಲೆ ಬಿಜೆಪಿಯವರು ಹೋರಾಟ ಶುರು ಮಾಡಿದ್ರು. ಬಿಜೆಪಿಯವರು ಒಂದು ರೀತಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಆಡಿದರು. ರಾಜಕೀಯಕ್ಕಾಗಿ  ಹೋರಾಟ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

ಶುಗರ್ ಲೆವೆಲ್ 200 ರ ಒಳಗಿದ್ದರೆ ಮಾತ್ರೆ ತೆಗೆದುಕೊಳ್ಳಬೇಕೇ: ಡಾ ಬಿಎಂ ಹೆಗ್ಡೆ ನೀಡಿದ್ದ ಸಲಹೆಯಿದು

ಸುಜಾತ ಭಟ್ ಉಲ್ಟಾ ಹೊಡೆಯುತ್ತಿದ್ದಂತೇ ಶಾಕಿಂಗ್ ಹೇಳಿಕೆ ನೀಡಿದ ಗಿರೀಶ್ ಮಟ್ಟೆಣ್ಣನವರ್

Dharmasthala case: ಮಾಸ್ಕ್ ಮ್ಯಾನ್ ಅರೆಸ್ಟ್

ಅನನ್ಯಾ ಭಟ್ ನನ್ನ ಮಗಳಲ್ಲ.. ಹೌದೌದು ಮಗಳು ಸುಜಾತ ಭಟ್ ಉಲ್ಟಾ ಪಲ್ಟಾ

ಮುಂದಿನ ಸುದ್ದಿ
Show comments