Publish Date: Fri, 31 Jan 2025 (12:19 IST)
Updated Date: Fri, 31 Jan 2025 (12:22 IST)
ಬೆಂಗಳೂರು: ಡಿಕೆ ಶಿವಕುಮಾರ್ ಹೇಳಿದವರೇ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
ಹಾಲಿ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಯತ್ನಾಳ್, ಈ ಮೊದಲಿನಿಂದಲೂ ವಿಜಯೇಂದ್ರ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಲೇ ಇದ್ದಾರೆ. ಡಿಕೆಶಿ ಹೇಳಿದವರೇ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಟಾಂಗ್ ನೀಡಿದ್ದರು.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಇಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ಅವರು ನಾನ್ಯಾಕ್ರೀ ಅವರ ಪಾರ್ಟಿ ವಿಚಾರಕ್ಕೆ ಹೋಗಲಿ? ನಾನು ವಕ್ತಾರನಲ್ಲ ಎಂದಿದ್ದಾರೆ.
ನಮಗೆ ನಮ್ಮ ಪಾರ್ಟಿಯಲ್ಲೇ ಬೇಕಾದಷ್ಟು ಕೆಲಸ ಇದೆ. ಬಿಜೆಪಿಯವರಿಗೆ ಈಗ ಮಾಡಕ್ಕೆ ಕೆಲಸ ಇಲ್ಲ. ಅವರಿಗೆ ಜನರು ವಿರೋಧ ಪಕ್ಷದವರಾಗಿ ಕೆಲಸ ಕೊಟ್ಟಿದ್ದಾರೆ. ಅದನ್ನು ಮಾಡೋದು ಬಿಟ್ಟು ಏನೇನೋ ಆರೋಪ ಮಾಡ್ತಿರ್ತಾರೆ. ಅವರದ್ದು ಯಾವತ್ತೂ ಇದ್ದಿದ್ದೇ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.