Publish Date: Mon, 11 Jun 2018 (09:16 IST)
Updated Date: Mon, 11 Jun 2018 (09:17 IST)
ಬೆಂಗಳೂರು: ಕೆಲವು ಅತೃಪ್ತ ಜೆಡಿಎಸ್, ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆಂಬ ಬಿಎಸ್ ಯಡಿಯೂರಪ್ಪ ಆರೋಪಕ್ಕೆ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಶಾಸಕರಲ್ಲಿದ್ದ ಅಸಮಾಧಾನಗಳೆಲ್ಲವೂ ಈಗ ಪರಿಹಾರವಾಗಿದೆ. ಮೊದಲು ಯಡಿಯೂರಪ್ಪನರು ಸೋಲು ಒಪ್ಪಿಕೊಳ್ಳಲಿ. ಸುಮ್ಮನೇ ಸಮ್ಮಿಶ್ರ ಸರ್ಕಾರದ ಶಾಸಕರ ಮೇಲೆ ಆರೋಪ ಮಾಡುವುದು ಬೇಡ’ ಎಂದಿದ್ದಾರೆ.
ಮೊದಲು ಕೆಲವು ನಾಯಕರಲ್ಲಿ ಅಸಮಾಧಾನ ಇದ್ದಿದ್ದು ನಿಜ. ಆದರೆ ನಾವು ಎಲ್ಲವನ್ನೂ ಕೂತು ಮಾತುಕತೆ ಮೂಲಕ ಬಗೆ ಹರಿಸಿದ್ದೇವೆ. ಈಗ ಎಲ್ಲವೂ ಚೆನ್ನಾಗಿಯೇ ಇದೆ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.