Publish Date: Wed, 14 Dec 2022 (21:07 IST)
Updated Date: Wed, 14 Dec 2022 (21:14 IST)
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮದ್ಯಾಹ್ನ ಬಿಸಿಯೂಟ ಸೇವನೆಗೆ ಅನುಕೂಲವಾಗಲೆಂದು ವಿದ್ಯಾರ್ಥಿಗಳಿಗೆ ದಾನಿಗಳಿಂದ ಉಚಿತ ತಟ್ಟೆ ಲೋಟ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿಯಿಂದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿರುವ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ತಾಲ್ಲೂಕಿನ ಸಮಾಜ ಸೇವಕರು ಹಾಗೂ ದಾನಿಗಳಾದ ನಾರಾಯಣಸ್ವಾಮಿ ರವರು ತಟ್ಟೆ ಲೋಟ ಹಾಗೂ ಸಿಹಿ ಹಂಚಿ ದಾನಿಗಳಾದ ನಾರಾಯಣಸ್ವಾಮಿ ರವರು ಮಾತನಾಡಿ ವಿದ್ಯೆಯನ್ನು ಹಣದಿಂದ ಸಂಪಾದನೆ ಮಾಡಲಾಗುವದಿಲ್ಲಾ ವಿದ್ಯಾರ್ಥಿಗಳಾದ ನೀವು ತಂದೆ ತಾಯಿಗಳು ಹೇಳಿದಂತೆ ಗೌರವ ಕೊಟ್ಟು ನಡೆದುಕೊಂಡು ಒಳ್ಳೆ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಕ್ಕೆ ಬೆಳೆಯಬೇಕು ಒಳ್ಳೆ ಉದ್ಯೋಗ ಅಥವಾ ಉದ್ಯಮಿಗಳಾಗಿ ಬೆಳೆದು ಮುಂದಿನ ದಿನಗಳಲ್ಲಿ ತಾವು ಬಂದು ವೇದಿಕೆ ಮೇಲೆ ಕೂತು ತಮ್ಮ ಕೈಲಾದ ಸಹಾಯನ್ನು ಬಡ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾಡಬೇಕೆಂದು ಕಿವಿ ಮಾತು ಹೇಳಿ ಶುಭ ಆರೈಸಿದರು.